ಜೀವ ಕಾಪಾಡುವ ವೈದ್ಯರು ದೇವರಷ್ಟೇ
ಶ್ರೇಷ್ಟರು
ಇಂಡಿ : ವೈದ್ಯೋ ನಾರಾಯಣ ಹರಿ, ದೇವರು ಮನುಷ್ಯನಿಗೆ ಜನ್ಮ ನೀಡಿದರೆ, ಜೀವವನ್ನು ಕಾಪಾಡುವ ವೈದ್ಯರು ಜನ್ಮ ನೀಡಿದ ದೇವರಷ್ಟೇ ಶ್ರೇಷ್ಟರು ಎಂದು
ಪರಮಪೂಜ್ಯ ನಾಗಣಸೂರದ ಶ್ರೀಕಂಠ
ಶಿವಾಚಾರ್ಯರರು ನಾಗಣಸೂರ ಹೇಳಿದರು.
ಪಟ್ಟಣದ ಆರಾಧ್ಯ ದೈವ ಸದ್ಗುರು ಶ್ರೀ ಶಾಂತೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ವಿಜಯಪುರದ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ ಎಂ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ವತಿಯಿಂದ, ಇಂಡಿಯ ಕನ್ನಡ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ, ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಸಸಿಗೆ
ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶಿಬಿರದ ಸಂಚಾಲಕ ಮತ್ತು ಶಸ್ತ್ರಚಿಕಿತ್ಸಾ ವಿಭಾಗದ
ಮುಖ್ಯಸ್ಥರಾದ ಡಾ.ಮಂಜುನಾಥ.ಕೋಟೆಣ್ಣವರ
ಅವರು, ಬಿ ಎಲ್ ಡಿ ಇ ಆಸ್ಪತ್ರೆ ಸಾಮಾನ್ಯ ಜನರ
ಆರೋಗ್ಯ ಕಾಳಜಿಗೆ ಸದಾ ಸಿದ್ಧವಿದ್ದು, ನಿರಂತರವಾಗಿ
ಆಸ್ಪತ್ರೆಯ ವತಿಯಿಂದ ಇಂತಹ ಉಚಿತ ಆರೋಗ್ಯ
ತಪಾಸಣೆ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ.
ಯಾವುದೇ ತರಹದ ಕಾಯಿಲೆಗೆ ಶಿಬಿರದಲ್ಲಿ ಲಭ್ಯವಿರುವ ವಿವಿಧ ತಜ್ಞ ವೈದ್ಯರಿಂದ ಉಚಿತ ಚಿಕಿತ್ಸೆ ಪಡೆಯಬಹುದು ಮತ್ತು ಹೆಚ್ಚಿನ ತಪಾಸಣೆ ಅಥವಾ ಶಸ್ತ್ರಚಿಕಿತ್ಸೆಯ ಅವಶ್ಯವಿದ್ದಲ್ಲಿ ಬಿ ಎಲ್ ಡಿ ಇ ಆಸ್ಪತ್ರೆಗೆ ದಾಖಲಾಗಿ ಉಚಿತ ಚಿಕಿತ್ಸೆ ಪಡೆಯಲು ಸಲಹೆ ನೀಡಿದರು.
ಶ್ರೀ ಶಾಂತೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕಾಸುಗೌಡ ಬಿರಾದಾರ, ಶಿಕ್ಷಕ ದಶರಥ ಕೋರಿ ಮಾತನಾಡಿದರು.
ಶಿಬಿರದಲ್ಲಿ 1990 ಸಾಲಿನ ಎಸ್ಸೆಸ್ಸೆಲ್ಸಿ ಶ್ರೀ ಶಾಂತೇಶ್ವರ
ಹೈಸ್ಕೂಲು ಗೆಳೆಯರ ಬಳಗದ ಸುರೇಶ ಅವರಾದಿ, ರಮೇಶ ಕುಲಕರ್ಣಿ, ಉಮೇಶ ಶಿವಯೋಗಿಮಠ, ಬಸು ದೇವರ, ರವಿ ವಂದಾಲ ಮತ್ತು ಶ್ರೀ ಶಾಂತೇಶ್ವರ ಜಾತ್ರಾ ಮಹೋತ್ಸವ ಕಮೀಟಿಯ ಪ್ರಕಾಶ ಬಿರಾದಾರ, ಅನಿಲಗೌಡ ಬಿರಾದಾರ, ಬಸವರಾಜ ದೇವರ, ಪ್ರಚಂಡಿ
ಮತ್ತಿತರಿದ್ದರು.
ಶಿಬಿರದಲ್ಲಿ ವಿವಿಧ ವಿಭಾಗಗಳ ತಜ್ಞ ವೈದ್ಯರಾದ
ಡಾ.ಮಂಜುನಾಥ ಸಾವಂತ, ಡಾ.ಪೂರ್ಣಚಂದ್ರ ನಿಗಡಿ,
ಡಾ.ಅತುಲ ಥೊಬ್ಬಿ, ಡಾ. ಸಂಜಿತ, ಡಾ.ನಿವೇದಾ, ಪ್ರಕಾಶ ದೇಗಿನಾಳ, ದತ್ತು, ಸಾರ್ವಜನಿಕ ಸಂಪರ್ಕಾಧಿಕಾರಿ ಶಾಂತೇಶ, ಅನಿಲ್, ರಕ್ತ ಭಂಡಾರದ ಅಶೋಕ ಪಾಟೀಲ,
ಸಿದ್ದು ಪೂಜಾರಿ ಭಾಗವಹಿಸಿದ್ದರು. ಸುಮಾರು 250 ಕ್ಕೂ ಹೆಚ್ಚು ರೋಗಿಗಳನ್ನು ತಪಾಸಣೆ ಮಾಡಿ, ಸುಮಾರು 60 ಜನರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬಿ ಎಲ್ ಡಿ ಇ ಆಸ್ಪತ್ರೆಗೆ ದಾಖಲಾಗಲು ಶಿಫಾರಿಸಲಾಯಿತು. 8 ಜನ ರಕ್ತದಾನ ಮಾಡಿದರು.
ಇಂಡಿ ಪಟ್ಟಣದ ಆರಾಧ್ಯ ದೈವ ಸದ್ಗುರು ಶ್ರೀಶಾಂತೇಶ್ವರ ಜಾತ್ರಾ ಮಹೋತ್ಸವದ
ಪ್ರಯುಕ್ತ ಜರುಗಿದ, ಉಚಿತ ಆರೋಗ್ಯ
ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು
ಶ್ರೀಕಂಠ ಶಿವಾಚಾರ್ಯರರು ಉದ್ಘಾಟಿಸಿ
ಮಾತನಾಡಿದರು.