ಇಂಡಿ : ಸಾಮೂಹಿಕ ಸತ್ಯನಾರಾಯಣಸ್ವಾಮಿಯ ಪೂಜೆ, ಧಾರ್ಮಿಕ ಸಭಾ ಹಾಗೂ ಭಾಗ್ಯವಂತಿ ಫ್ರೌಢ ಶಾಲೆ ಚವಡಿಹಾಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಪತ್ರಿಕೆಗೆ ಮಾಹಿತಿ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಇಂಡಿ ತಾಲ್ಲೂಕು ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜಾ ಸಮಿತಿ ಪ್ರಗತಿಬಂಧು ಸ್ವ- ಸಹಾಯ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಕಾರ್ಯಕ್ರಮ ಜರುಗುವುದು.
ಪಟ್ಟಣದ ಜಿ ಆರ್ ಜಿ ಕಲಾ ಮಹಾವಿದ್ಯಾಲಯದಲ್ಲಿ ರವಿವಾರ ಜ- ೨೨ ಬೆಳಿಗ್ಗೆ ೮:೩೦ ಕ್ಕೆ ಪೂಜಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ ೧೨:೩೦ ರಿಂದ ಧಾರ್ಮಿಕ ಕಾರ್ಯಕ್ರಮ ಜರಗುವವು.
ಸತ್ಯನಾರಾಯಣಸ್ವಾಮಿಜಿ ಪೂಜೆ ಕುಳಿತು ಕೊಳ್ಳುವ ದಂಪತಿಗಳು ಪುಜಾ ಸಾಮಗ್ರಿಗಳನ್ನು ತೆಗೆದುಕೊಂಡು ಬರಬೇಕು.
ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ಶ್ರೀ. ಷ.ಬ. ಅಭಿನವ ಮುರಘೇಂದ್ರ ಶಿವಾಚಾರ್ಯರರು ಹಿರೇಮಠ ಶಿರಶ್ಯಾಡ, ಗೌರವಾಧ್ಯಕ್ಷರು, ಶಾಸಕ ಯಶವಂತರಾಯಗೌಡ ಪಾಟೀಲ, ಅಧ್ಯಕ್ಷತೆ ಬನ್ನೆಮ್ಮ ಹದರಿ ಪುರಸಭೆ ಅಧ್ಯಕ್ಷರು, ಮುಖ್ಯ ಅತಿಥಿಯಾಗಿ ರಾಮಚಂದ್ರ ಗಡದೆ ಹಾಗೂ ಇನ್ನೂ ಅನೇಕ ಮುಖಂಡರು ಪಾಲ್ಗೊಳ್ಳವರು.