ಮೀಸಲಾತಿ ಹುನ್ನಾರ, ಹೋರಾಟದ ದಿಕ್ಕು ತಪ್ಪಿಸಿದ್ರೇ ಶಾಸಕ ಯತ್ನಾಳರ ಹಗರಣ, ದೌರ್ಬಲ್ಯಗಳನ್ನು ಹೊರಹಾಕಲಾಗುವುದು : ಸುರೇಶ್ ಬಿರಾದಾರ..
ವಿಜಯಪುರ : ಪಂಚಮಸಾಲಿ 2A ಮೀಸಲಾತಿ ಹೋರಾಟದ ಲಾಭ ಪಡೆಯುವ ಹುನ್ನಾರ ನಡೆಯುತ್ತಿದೆ ಎಂದು ಪಂಚಮಸಾಲಿ ಮುಖಂಡ ಸುರೇಶ ಬಿರಾದಾರ ಆರೋಪಿಸಿದರು. ವಿಜಯಪುರದಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಪಂಚಮಸಾಲಿ ಹೋರಾಟಕ್ಕೆ ಬಂದಿದ್ದಾರೆ. ಆದ್ರೇ, ಹೋರಾಟಕ್ಕೆ ಬಂದು ಬಿಎಸ್ವೈ, ಬಿವೈ ವಿಜಯೇಂದ್ರ, ಸಚಿವ ಮುರುಘೇಶ ನಿರಾಣಿ ಬಗ್ಗೆ ಬೈಯ್ದಿದ್ದು ಬಿಟ್ಟರೆ ಸಮಾಜಕ್ಕೆ ನಿಮ್ಮ ಕೊಡುಗೆ ಏನು.? ಎಂದು ಕಿಡಿಕಾರಿದರು. ಹೋರಾಟದ ದಿಕ್ಕು ತಪ್ಪಿಸಿದ್ರೇ ಶಾಸಕ ಯತ್ನಾಳರ ಹಗರಣ, ದೌರ್ಬಲ್ಯಗಳನ್ನು ಹೊರಹಾಕಲಾಗುವುದು ಎಂದು ವಾಗ್ದಾಳಿ ಮಾಡಿದರು. ಪಂಚಮಸಾಲಿ 2a ಮೀಸಲಾತಿ ನೀಡುವ ಬಗ್ಗೆ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದರು.