ತ್ರಿವರ್ಣ ಧ್ವಜ ಅಂದ್ರೆ ಅದು ದೇಶದ ಶಕ್ತಿ : ಸಂಗನಗೌಡ ಬಿರಾದಾರ.
ನಾವು ದೇಶ ರಕ್ಷಿಸುವ ಕೆಲಸ ಮಾಡೋಣ : ಸಂಗನಗೌಡ ಬಿರಾದಾರ..
ಇಂಡಿ : ತ್ರಿವರ್ಣ ಧ್ವಜ ಅಂದರೆ ದೇಶದ ಶಕ್ತಿ, ಇಂದಿನ ವ್ಯವಸ್ಥೆಯಲ್ಲಿ ಕೆಟ್ಟ ಘಾತುಕ ಶಕ್ತಿ ಹೆಚ್ಚಾಗುತ್ತಿದೆ. ಸಾಮಾಜಿಕ ವ್ಯವಸ್ಥೆ ಹಾಳು ಮಾಡುವ, ಶಾಂತತೆ ಕದಡುವ ಮತ್ತು ಆಂತರಿಕ, ಬಾಹ್ಯವಾಗಿ ದೇಶ ದ್ರೋಹ ಚಟುವಟಿಕೆಗಳು ನಡೆಸುವರ ಸಂಖ್ಯೆ ಹೆಚ್ಚಾಗಿದೆ. ಅಂತಹವರಿಗೆ ಕಾನೂನು ವ್ಯವಸ್ಥೆ ಮೂಲಕ ಬಿಸಿ ಮುಟ್ಟಿಸಬೇಕು. ಯುವ ಸಮುದಾಯ ಸಾಮಾಜಿಕ ಕಾರ್ಯಗಳು ಮಾಡುವ ಮೂಲಕ ದೇಶ ರಕ್ಷಿಸುವ ಕೆಲಸ ಮುಂದಾಗಬೇಕು ಎಂದು ಸಂಗನಗೌಡ ಬಿರಾದಾರ ಹೇಳಿದರು.
ಇಂಡಿ ಪಟ್ಟಣದ ಪ್ರತಿಷ್ಠಿತ ಎಕ್ಸಲೆಂಟ್ ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆ ಹಾಗೂ ಎಸ್ ಎಸ್ ಪ್ಯಾರಾಮೆಡಿಕಲ್ ಕಾಲೇಜು ಆಶ್ರಯ ಆವರಣದಲ್ಲಿ ೭೪ ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರೆವರಿಸಿ ಮಾತಾನಾಡಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್ .ಬಿ. ಕೆಂಬೋಗಿ ರೈತ ಮುಖಂಡ ಗುರಪ್ಪ ಅಗಸರ ಅವರಗೆ ವಿಶೇಷ ಸನ್ಮಾನಿಸಿ ಮಾತಾನಾಡಿದರು. ರೈತ ನಮ್ಮ ಉಸಿರು, ನಮ್ಮ ದೇಶದ ಬೆನ್ನೆಲುಬು ಎಂದು ಹೇಳಿದರು. ದೇಶ ಭಕ್ತಿ ಅಂದ್ರೆ ಹೇಗೆ ? ಗಣರಾಜ್ಯೋತ್ಸವ ಅಂದ್ರೆ ಏನು ಅಂತಾ ಅರ್ಥ ಮಾಡಿಕೊಳ್ಳುಬೇಕು. ನಮ್ಮ ದೇಶ ಸ್ವತಂತ್ರವಾಯಿತು ನಿಜ. ಆದರೆ ದೇಶದ ವ್ಯವಸ್ಥೆಯನ್ನು ಮುನ್ನಡೆಸಲು ವ್ಯವಸ್ಥಿತವಾದ ವಾತಾವರಣ ನಿರ್ಮಾಣ ಮಾಡಲು ಬೇಕಾದ ಕಾಯಿದೆ ಕಾನೂನುಗಳು ರಚಿಸಿದ್ದಕ್ಕೆ ಎಲ್ಲರೂ ಇಂದು ಇಷ್ಟೊಂದು ನೆಮ್ಮದಿಯ ಶಾಂತಿ ಸಹಬಾಳ್ವೆ ನಡೆಸುತ್ತಿರುವುದು. ಇದುವೇ ಸಂವಿಧಾನದ ಆಶಯ. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ್ದು ಎಂದರು. ಇನ್ನೂ ಭಕ್ತಿ ಅಂದರೆ, ತಾಯಿಯನ್ನ ಎಷ್ಟು ಗೌರವದಿಂದ, ಕಾಳಜಿ ಪ್ರೀತಿಸುತ್ತೇವೋ ! ಹಾಗೆ ನಮ್ಮ ದೇಶ, ಭಾಷೆಯನ್ನು ಗೌರವಿಸಬೇಕು. ಒಳ್ಳೆಯ ಪ್ರಜೆಯಗಳಾಗಿ ಬದುಕು ನಡೆಸಿದ್ರೆ ಸಾಕು ಅದುವೇ ನೀವು ನಿಮ್ಮ ಕುಟುಂಬಕ್ಕೆ, ದೇಶಕ್ಕೆ ಕೊಡುವ ಕೊಡುಗೆ, ಗೌರವ ಎಂದು ಹೇಳಿದರು.
ಇನ್ನೂ ಶಾಲಾ ಕಾಲೇಜು ವಿಧ್ಯಾರ್ಥಿಗಳಿಂದ ದೇಶ ಭಕ್ತಿ ಗೀತೆ, ಭಾವ ಗೀತೆ, ನಾಟಕ, ನೃತ್ಯ ಅನೇಕ ವಿಶೇಷ ಕಾರ್ಯಕ್ರಮ ಜರಗಿದವು.
ಇದೇ ಸಂದರ್ಭದಲ್ಲಿ ಸಂಸ್ಥೆ ಆಡಳಿತ ಅಧಿಕಾರಿ, ಪ್ರಾಂಶುಪಾಲರು, ಉಪನ್ಯಾಸಕರು, ಮುಖ್ಯ ಗುರುಗಳು, ಸಹ ಶಿಕ್ಷಕರು, ನಗರ ಗಣ್ಯಮಾನ್ಯರು ಮತ್ತು ಪಾಲಕರು ಇನ್ನೂ ಅನೇಕರು ಉಪಸ್ಥಿತರಿದ್ದರು.