ಇಂಡಿ: ನಿಂಬೆನಾಡಿನ ಬಬಲಾದ ಗ್ರಾಮದ ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ ವೃತ್ತಿಯಲ್ಲಿ ಶ್ರೂಶ್ರೂಷಕ ಮತ್ತು ಧರ್ಮಪತ್ನಿ ಕಮಲಾ ಪ್ರೀತು ದಶವಂತ ಸಾವಿನಾಚೆಗೂ ಸಮಾಜಸೇವೆ ಮಾಡಲು ಹಾಗೂ ಜೀವಂತವಾಗಿರಲು ಅಷ್ಟೇ ಅಲ್ಲದೆ ಈ ವಿಶ್ವವನ್ನು ನೋಡಲು ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪುರವರ ಜನ್ಮದಿನವಾದ ಇಂದು ದೇಹಾಂಗದಾನ ಘೋಷಣೆ ಮಾಡಲಾಗಿದೆ ಅಂತ ತಿಳಿಸಿದರು.
ಅಲೆಮಾರಿ ಕುಟುಂಬದಲ್ಲಿ ಜನಸಿದ ಇವರು ಸಮಾಜಸೇವೆ, ಬಡವರ ಸೇವೆ ಅಂತ ತಮ್ಮ ಜೀವನವನ್ನೆ ಮೀಸಲಿಟ್ಟು ಅನೇಕ ಸಾಮಾಜಿಕ ಕಾರ್ಯಗಳ
ಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.
ಬಡವರ ಸೇವೆಯೇ ದೇವರ ಪೂಜೆ ಅಂತ ಎಲ್ಲ ಕಾರ್ಯಕ್ರಮಗಳಲ್ಲಿ ಘೋಷಣೆ ಮಾಡುತ್ತ ದೇಹಾಂಗದಾನˌ ಅಂಗಾಂಗದಾನ ಜಾಗೃತಿ ಮೂಡಿಸಿ, “ಮಣ್ಣಲ್ಲ ಮಣ್ಣಾಗಿ ಹೋಗುವ ದೇಹವನ್ನು ಮಣ್ಣು ಮಾಡದೇ ˌ ದೇಹವನ್ನು ಧಹನ ಮಾಡದೇ ಇನ್ನೊಬ್ಬರಿಗೆ ದಾನ” ಮಾಡುವದರಿಂದ ಅವರ ಬಾಳಲ್ಲಿ ಬೆಳಕು ಚೆಲ್ಲಬಹುದು.
ಅಲ್ಲದೇ ವೈಧ್ಶಕೀಯ ವಿಧ್ಶಾರ್ಥಿಗಳ ಸಂಶೋಧನೆಗೆ ಮತ್ತು ಅವರ ಉತ್ತಮ ಶಿಕ್ಷಣಕ್ಕೆ ಸಹಕಾರಿಯಾಗುವದು ಅಂತ ತಿಳಿಸಿ ತಮ್ಮ ಜೀವನದಲ್ಲಿ 26 ಬಾರಿ ರಕ್ತದಾನಮಾಡಿˌ 10 ಬ್ರಹತ್ ಆರೋಗ್ಶ ಶಿಭಿರಗಳನ್ನು ಸ್ವಂತ ಖರ್ಚಿನಲ್ಲಿ ಮಾಡಿ ಸಹಸ್ರಾರು ಜನರಿಗೆ ಸರಕಾರದ ಯೋಜನೆಗಳ ಅಡಿಯಲ್ಲಿ ಉಚಿತವಾಗಿ ಶಸ್ತ್ರ ಚಕಿತ್ಸೆ ಮಾಡಿಸಿಕೊಟ್ಟು ವಿಜಯಪೂರ, ಕಲಬುರ್ಗಿ, ಯಾದಗೀರಿ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಅನೇಕ ರೋಗಿಗಳ ಬಾಳಲ್ಲಿ ನಗುವಿನ ಬೆಳಕು ಚೆಲ್ಲಿ ತಮ್ಮ ದೇಹವನ್ನು ದಾನ ಮಾಡಲು ಬಿಎಲ್ ಡಿ ಇ ಆಸ್ಪತ್ರೇಗೆ ಬರೆದುಕೊಡುವದಾಗಿ ತಿಳಿಸಿದರು.