ಇಂಡಿ : ನಿಂಬೆನಾಡಿನ ಬಹುಹಳ್ಳಿ ಕುಡಿಯುವ ನೀರಿನ ಘಟಕಕ್ಕೆ ಸಂಸದ ರಮೇಶ್ ಜಿಗಜಿಣಗಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಘಟಕಕ್ಕೆ ಸಂಸದ ಜಿಗಜಿಣಗಿ ಆಗಮಿಸಿ ಮೂಲಭೂತ ಸೌಕರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು. ಇನ್ನೂ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ನೀರು ಗಬ್ಬು ನಾರುತ್ತಿದ್ದು ಸಾರ್ವಜನಿಕರ ದೂರಿನ ಮೇರೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಎಸ್ ಜಿ ಕಗ್ಗೊಡ, ಇಲಿಯಾಳ ಸೆರಿದಂತೆ ಎಸ್ ಆರ್ ರುದ್ರವಾಡಿ ಹಾಗೂ ಎಲ್ ಟಿ ರಾಠೊಡ ಸೆರಿದಂತೆ ಸಿಭ್ಭಂದಿಗಳು ಉಪಸ್ಥಿತರಿದ್ದರು.