ಕನ್ನಡಾಂಭೆ ರಥಯಾತ್ರೆ ಹಿನ್ನೆಲೆ _ಜ- 28 ರಂದು ಮಿನಿ ವಿಧಾನ ಸೌಧದಲ್ಲಿ ಪೂರ್ವಭಾವಿ ಸಭೆ
ಇಂಡಿ : ಕರ್ನಾಟಕ ಸಂಭ್ರಮ-50ರ ಅಂಗವಾಗಿ ಜ್ಯೋತಿ ರಥಯಾತ್ರೆಯನ್ನು ಸ್ವಾಗತ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಸಭಾ ಭವನದಲ್ಲಿ ಜ- 28 ಬೆಳಿಗ್ಗೆ 10 ಘಂಟೆಗೆ ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರ ಅಧ್ಯಕ್ಷತೆಯಲ್ಲಿ ಪೂರ್ವ ಸಭೆ ಕರೆಯಲಾಗಿದೆ ಎಂದು ತಹಶಿಲ್ದಾರ ಬಿ ಎಸ್ ಕಡಕಬಾವಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆಯನ್ನು ತಾಂಬಾ ಗ್ರಾಮದಿಂದ ನಾಳೆ ಸಾಯಂಕಾಲ ಇಂಡಿ ಪಟ್ಟಣಕ್ಕೆ ಆಗಮಿಸಲಿದ್ದು, ರಥಯಾತ್ರೆಕ್ಕೆ ಅದ್ಧೂರಿಯಾಗಿ ಸ್ವಾಗತಿಸಲು ತಹಶೀಲದಾರ ಕಾರ್ಯಾಲಯದ ಆಡಳಿತ ಸೌದದ ಸಭಾ ಭವನದಲ್ಲಿ ಜ- 28, ಬೆಳಗ್ಗೆ:10-00 ಗಂಟೆಗೆ ಸಭೆ ಕರೆಲಾಗಿದ್ದು, ಇಂಡಿ ತಾಲೂಕಿನ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು ಕನ್ನಡ ಪರ ಒಕ್ಕೂಟಗಳು ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು
ಹಾಜರಾಗಿ ಸಲಹೆ ಸೂಚನೆ ನೀಡಲು ತಿಳಿಸಿದ್ದಾರೆ.