ಹೆಸ್ಕಾಂ ಕಚೇರಿ ಮುಂಭಾದಲ್ಲಿ ಒಲೆ ಹೊತ್ತಿಸಿ ಆಕ್ರೋಶ..!
ಇಂಡಿ : ಸರಿಯಾಗಿ,ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ನೂರಾರು ರೈತರು ಕೆಇಬಿ ಎದುರುಗಡೆ ಒಲೆ ಹೊತ್ತಿಸಿ ಅನ್ನ ಬೇಯಿಸಿ ಅಕ್ರೋಷ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದರು.
ತಾಲೂಕಿನ ಹಿರೇಮಸಳಿ ಗ್ರಾಮದ ಹೆಸ್ಕಾಂ ಕಛೇರಿ ಎದುರು ಬೆಳಿಗ್ಗೆ 9 ಘಂಟೆಯಿಂದಲೆ ಪ್ರತಿಭಟನೆ ಪ್ರಾರಂಭಿಸಿದ ರೈತರು, ಅಧಿಕಾರಿಗಳ ಬೇಜವಾಬ್ದಾರಿ ನಿರ್ಲಕ್ಷ್ಯ ದಿಂದ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಅದಲ್ಲದೇ ಪಕ್ಕದ ಗ್ರಾಮಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವರು ಆದರೆ ಮಸಳಿ ಗ್ರಾಮಕ್ಕೆ ಸರಿಯಾಗಿ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಇನ್ನೂ ಈ ಬಗ್ಗೆ ಜವಾಬ್ದಾರಿ ಹೊತ್ತಿರುವ ಮತ್ತು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಮಳೆ ಅಭಾವದಿಂದ ರೈತರು ಕಂಗಾಲಾಗಿದ್ದಾರೆ. ಅದರಲ್ಲಿ ರೈತರು ಬರಗಾಲ ಜೊತೆಗೆ ವಿದ್ಯುತ್ ಕ್ಷಾಮ ಅನುಭವಿಸುತ್ತಿದ್ದಾರೆ. ಆದರೆ ಸರಿಯಾಗಿ ಅಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದ ಹಿನ್ನೆಲೆಯಲ್ಲಿ ಬೆಳೆಗಳು ಒಣಗುತ್ತಿವೆ. ನಿಗದಿಪಡಿಸಿದಂತೆ ಹೆಸ್ಕಾಂ ಪ್ರತಿದಿನ 7 ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಕಳೆದ 15 ದಿನಗಳಿಂದ ಅನಿಯಮಿತ ಲೋಡ್ ಶೆಡ್ಡಿಂಗ್ ಮುಂದುವರಿದಿದೆ. ಸುಮಾರು ದಿನಗಳಿಂದ ರೈತರ ಪಂಪ್ಸೆಟ್ಗಳಿಗೆ ಸಂಪೂರ್ಣ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಬೆಳೆ ರಕ್ಷಣೆಗೆ ಪರದಾಡುತ್ತಿದ್ದೇವೆ. ಸಮರ್ಪಕವಾಗಿ ವಿದ್ಯುತ್ ಕೊಡಿ, ಇಲ್ಲವೇ ವಿಷ ಕೊಡಿ ಎಂದು ಮನೋಜಗೌಡ ಪಾಟೀಲ, ಅಲವತ್ತುಕೊಂಡರು.
ಕಳೆದ ತಿಂಗಳು ತಾಲೂಕು ಕಛೇರಿಯ ಪ್ರತಿಭಟನೆ ನಡೆಸಿದಾಗಲೂ ಹೆಸ್ಕಾಂ ಸಿಬ್ಬಂದಿ ಸಮರ್ಪಕ ವಿದ್ಯುತ್ ಪೂರೈಕೆಯ ಭರವಸೆ ನೀಡಿದ್ದರು. ಒಂದೆರೆಡು ದಿನ ಸರಿಯಾಗಿ ವಿದ್ಯುತ್ ಪೂರೈಕೆ ಮಾಡಿ, ನಂತರ ಮತ್ತೆ ವಿದ್ಯುತ್ ಅಭಾವ ಸೃಷ್ಟಿಸಿದ್ದರು. ಅಧಿಕಾರಿಗಳು ರೈತರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಇದು ನಿರಂತರವಾದರೆ ಮುಂದಿನ ಅನಾಹುತಗಳಿಗೆ ಹೆಸ್ಕಾಂ ಅಧಿಕಾರಿಗಳೇ ಹೊಣೆಗಾರರು ಆಗಬೇಕಾಗುತ್ತದೆ ಎಂದು ರೈತ ಮುಖಂಡ ನಬಿಲಾಲ ಸೌದಾಗಾರ, ಹಣಮಂತ ಮೇತ್ರಿ, ಸಿದ್ದು ಕಲ್ಲೂರ, ಎಚ್ಚರಿಸಿದರು.
ಇನ್ನೂ ವಿಷಯ ತಿಳಿದ ಹೆಸ್ಕಾಂ ಇಲಾಖೆ ಎಇ ಬಿರಾದಾರ ಹಾಗೂ ಎಇಇ, ಎಸ್ ಆರ್ ಮೆಡೆದಾರ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿದರು. ತದನಂತರ ರೈತರ ಬೇಡಿಗಳಿಗೆ ಸಕಾರಾತ್ಮಕ ಸ್ಪಂದಿಸುವ ಭರವಸೆ ನೀಡಿ, ರೈತರರಿಂದ ಪ್ರತಿಭಟನೆ ಕೈ ಬಿಡಲು ಮನವೊಲಿಸಲು ಯಶಸ್ವಿಯಾದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಶಿವಾನಂದ್ ಮಲಕೊಂಡ್, ಸಂಜು ಸೋಲಾಪುರ, ಸಿದ್ದು ಕಲ್ಲೂರ
ಸಂಜು ರಜಪೂತ್, ರವಿ ರಾಯಜಿ, ಪುಂಡಲಿಕ ಕಪಾಲಿ, ಗುರುರಾಜ್ ಪಾಟೀಲ್, ಪ್ರಕಾಶ್ ದೇವರಮನಿ
ಬೀಮು ಮೇತ್ರಿ, ಅನಿಲ ಕಲ್ಲೂರ, ನಬೀಲಾಲ ಜಮಾದಾರ್ ,ದಯಾನಂದ ಹುಬ್ಬಳ್ಳಿ ಹಾಗೂ ಅನೇಕ ರೈತರು ಗ್ರಾಮಸ್ಥರು ಉಪಸ್ಥಿತರಿದ್ದರು.