ಸಿರವಾರ: ರಾಯಚೂರ ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟದಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘಟನೆ(CITU)ಯ ವಿಸ್ತೃತ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಮಾರ್ಚ್ 4ರ ವಿಧಾನಸೌಧ ಚಲೋ ಹೋರಾಟಕ್ಕೆ ಎಲ್ಲಾ ನೌಕರರು ಭಾಗವಹಿಸುವ ಕುರಿತು ಚರ್ಚಿಸಲಾಯಿತು.
ಸಿಐಟಿಯು ಜಿಲ್ಲಾ ಸಹ ಕಾರ್ಯದರ್ಶಿ ಮಹಮ್ಮದ್ ಹನೀಫ್ ಹಾಗೂ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಮಾತನಾಡಿ, ಶಿಕ್ಷಣ ಇಲಾಖೆ ಶಿಫಾರಸ್ಸಿನಂತೆ ಅಕ್ಷರ ದಾಸೋಹ ನೌಕರರಿಗೆ ₹6,000, ₹ 5000 ಹೆಚ್ಚಳ ಮಾಡಬೇಕು. ಚಿಕ್ಕಬಳ್ಳಾಪುರ, ಮೈಸೂರು, ಮತ್ತು ಮಂಡ್ಯಗಳ ಬಿಸಿಯೂಟವನ್ನು ಇಸ್ಕಾನ್ ಗೆ ಕೊಡುವ ಪ್ರಯತ್ನ ಕೈಬಿಡಬೇಕು. ಬಿಸಿಯೂಟ ನೌಕರರನ್ನು ಖಾಯಂ ಮಾಡಿ ಶಾಸನಾತ್ಮಕ ಸವಲತ್ತುಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘಟನೆಯ(ಸಿಐಟಿಯು) ನ ಸಿರವಾರದ ಗೌರವಾಧ್ಯಕ್ಷ ಹುಸೇನ್ ಭಾಷಾ, ಅಧ್ಯಕ್ಷೆ ಗಂಗಮ್ಮ, ಪ್ರಧಾನ ಕಾರ್ಯದರ್ಶಿ ರೇಣುಕಾ, ಮಸ್ಕಿ ತಾಲೂಕು ಮುಖಂಡರಾದ ಬಸಮ್ಮ ಕೊಟೆಕಲ್, ಮೀನಾಕ್ಷಿ, ಅಯ್ಯಮ್ಮ ಸೇರಿದಂತೆ ಸಿರವಾರ ತಾಲೂಕಿನ ವಿವಿಧ ಶಾಲೆಗಳ ನೌಕರರು ಉಪಸ್ಥಿತರಿದ್ದರು.