ಗಾಂಧೀಜಿಯವರ ಸರಳತೆ ಮನುಕುಲಕ್ಕೆ
ಆದರ್ಶಪ್ರಾಯ
ಇಂಡಿ : ತಮ್ಮ ಬದುಕೇ ತಮ್ಮ ಸಂದೇಶ ಎಂದು ಬದುಕಿನ
ಪ್ರತಿ ಗಳಿಗೆಯನ್ನೂ ಮೌಲ್ಯದ ಜೊತೆಯಲ್ಲೇ ಬದುಕಿದ, ಸತ್ಯಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗಕ್ಕೊಡ್ಡಿಕೊಂಡ ರಾಷ್ಟ್ರಪಿತ ಗಾಂಧಿಜೀ ಎಂಬ ‘ಜಗದ್ಗುರುವಿನ’ ತತ್ವಾದರ್ಶಗಳ ಅನುಷ್ಠಾನ ನಮ್ಮ ಗುರಿಯಾಗಿರಲಿ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್,
ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ
ಅವರ ಪುಣ್ಯ ಸ್ಮರಣೆ ನಿಮಿತ್ತ ಹಮ್ಮಿಕೊಂಡ ಹುತಾತ್ಮರ ದಿನವನ್ನು ಉದ್ದೇಶಿಸಿ ಮಾತನಾಡಿದರು. ಸತ್ಯ, ಶಾಂತಿ, ಅಹಿಂಸೆ ಇವು ಗಾಂಧಿಜೀಯವರು ಪಾಲಿಸಿದ ತತ್ವಗಳಷ್ಟೇ ಅಲ್ಲ, ಅವರ ಬದುಕು ಕೂಡ. ತಮ್ಮ ಜೀವನದುದ್ದಕ್ಕೂ ಅವನ್ನು ಅನುಪಾಲಿಸಿದ ಗಾಂಧೀಜಿಯವರು, ಸ್ವಾತಂತ್ರ ನಂತರ ರಾಮರಾಜ್ಯದ ಬಗ್ಗೆ ಕನಸು ಕಂಡಿದ್ದರು. ಅವರ
ಮೌಲ್ಯಗಳು ಇಡೀ ಮನುಕುಲಕ್ಕೆ ಸದಾಕಾಲಕ್ಕೂ
ಆದರ್ಶಪ್ರಾಯ ಎಂದು ಹೇಳಿದರು.
ಶಿಕ್ಷಕಿ ಎಸ್ ಡಿ ಬಿರಾದಾರ ಮಾತನಾಡಿ, ಶಿಕ್ಷಕಿ ಸಾವಿತ್ರಿ
ಸಂಗಮದ, ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ
ಅನಿಲ ಪತಂಗಿ , ಶಿಕ್ಷಕಿ ಎಸ್ ಬಿ ಕುಲಕರ್ಣಿ , ಶಿಕ್ಷಕ ಎಸ್ ಆರ್ ಚಾಳೇಕರ , ಎಸ್ ವ್ಹಿ ಬೇನೂರ ಮಾತನಾಡಿದರು.
ಮುಖ್ಯ ಶಿಕ್ಷಕ ವಿ ವೈ ಪತ್ತಾರ, ಎ ಎಂಬೆದ್ರೇಕರ, ಶಿಕ್ಷಕ ಎಸ್ ಎಸ್ ಅರಬ, ಎಸ್ ಎಂ ಪಂಚಮುಖಿ, ಜೆ ಎಂ ಪತಂಗಿ, ಎಸ್ ಪಿ ಪೂಜಾರಿ, ಎನ್ ಬಿ ಚೌಧರಿ, ಎಸ್ ಎನ್ ಡಂಗಿ,ಜೆ ಸಿ ಗುಣಕಿ, ಶಾಂತೇಶ ಹಳಗುಣಕಿ, ಎಸ್ ವ್ಹಿ ಬೇನೂರ, ಎಫ್ ಎ ಹೊರ್ತಿ, ಆಶಾ ಕೋರಳ್ಳಿ, ಯಲ್ಲಮ್ಮ ಸಾಲೋಟಗಿ, ಸಂತೋಷ ಬಿರಾದಾರ ಮತ್ತಿತರಿದ್ದರು.
ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್
ಶಾಲೆಯಲ್ಲಿ ಹುತಾತ್ಮರ ದಿನವನ್ನು ಉದ್ದೇಶಿಸಿ
ಸಂತೋಷ ಬಂಡೆ ಮಾತನಾಡಿದರು.