ವಿಜಯಪುರ : ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹೆಸರಿನಲ್ಲಿ ಮೋಸ ಹೋಗದಂತೆ ಜನತೆ ಜಾಗೃತಿರಾಗಿ ಎಂದು ಎಸ್ಪಿ ಆನಂದಕುಮಾರ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನೌಕರಿ ಕೊಡಿಸುವ ವಂಚನೆ ಬೆಳಕಿಗೆ ಬಂದಿದೆ. ಇನ್ನು ವಿಶ್ವವಿದ್ಯಾಲಯ ಲಾಂಛನ, ಫೋಟೊ, ಹೆಸರು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಪತ್ರ ರೆಡಿ ಮಾಡುತ್ತಿದ್ದಾರೆ. ಅಲ್ಲದೇ, ಸರ್ಕಾರಿ ನೌಕರಿ ಹೆಸರಿನಲ್ಲಿ ಜನತೆ ಮೋಸ ಹೋಗಬಾರದು. ಅದಕ್ಕಾಗಿ ಜನತೆ ಎಚ್ಚರಿಕೆ ವಹಿಸಬೇಕು ಎಂದರು. ಇನ್ನು ಇಂತಹ ಪ್ರಕರಣ ಬೆಳಕಿಗೆ ಬಂದ್ರೇ ಸಮೀಪದ ಪೊಲೀಸ ಠಾಣೆ ಅಥವಾ 112ಗೆ ಕರೆ ಮಾಡುವಂತೆ ಎಸ್ಪಿ ಆನಂದಕುಮಾರ ಮನವಿ ಮಾಡಿದರು.