ಭೀಮಾತೀರದ ಎರಡು ಕುಟುಂಬಗಳ ನಡುವಿನ ವೈಷಮ್ಯಕ್ಕೆ ಎಡಿಜಿಪಿ ಅಲೋಕಕುಮಾರ ಅಂತ್ಯ ಹಾಡಿದರು.
ಚಡಚಣ : ಶಸ್ತ್ರಾಸ್ತ್ರಗಳು ಆಯುಧ ಪೂಜೆಗೆ ಇಟ್ಟಿಲ್ಲ. ಒಳ್ಳೆಯವರನ್ನ ರಕ್ಷಣೆ ಮಾಡುವುದು ಕೆಟ್ಟವರನ್ನ ನಿರ್ದಾಕ್ಷಿಣ್ಯವಾಗಿ ಧಮನ ಮಾಡುತ್ತೆವೆ ಎಂದು ಕಾನೂನು ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕ ಅಲೋಕಕುಮಾರ ಮಾತನಾಡಿದರು.
ಪಟ್ಟಣದಲ್ಲಿ ನಡೆದ ಕಾರ್ಯಕ್ರಮದ
ಅಕ್ಷರಿಗಾಗಿ ಆರಕ್ಷಕರು ಹಾಗೂ ಅಗ್ನಿಪಥ , ಅಗ್ನಿವೀರರೊಂದಿಗೆ ಸಂವಾದನ ಕಾರ್ಯಕ್ರಮ ಉದ್ಘಾಟಿಸಿದ ಹೇಳಿದರು.
ಸುಮಾರು ದಶಕಗಳ ದ್ವೇಷವನ್ನು ಬಿಟ್ಟು ಒಬ್ಬರಿಗೊಬ್ಬರು ಪ್ರೀತಿ ವಿಸ್ವಾಸದಿಂದ ಬದುಕಬೇಕು ಎಂಬುದು ನನ್ನ ದೃಢವಾದ ನಂಬಿಕೆಯಾಗಿತ್ತು. ಆದರೆ ಇಂದು ಎರಡು ಕುಟುಂಬಗಳು ಪರಸ್ಪರ ಪ್ರೀತಿ ಸಹಬಾಳ್ವೆಯಿಂದ ಇರುವ ಬಗ್ಗೆ ಹೇಳಿದಕ್ಕೆ ಖುಷಿ ತಂದಿದೆ ಎಂದು ವೇದಿಕೆ ಮೇಲೆಯೇ ಎರಡು ಗ್ಯಾಂಗ್ಗಳ ನಡುವೆ ಪೊಲೀಸರು ಅಪ್ಸತ್ ಮಾಡಿದರು. ಎಡಿಜಿಪಿ ಅಲೋಕ್ಕುಮಾರ್ ಎದುರು ಬೈರಗೊಂಡ ಹಾಗೂ ಚಡಚಣ ಕುಟುಂಬಸ್ಥರ ರಾಜಿ ಸಂಧಾನ ಯಶಸ್ವಿಗೊಳಿಸಿದರು.
ಆದ್ರೇ, ಮಹಾದೇವ ಸಾಹುಕಾರ್ ತನ್ನ ಮೂರು ಮಕ್ಕಳನ್ನು ಹೊಡೆಸಿದ್ದಾನೆ ಎಂದು ವಿಮಲಾಬಾಯಿ ಚಡಚಣ ಅಸಮಧಾನ ಹೊರಹಾಕಿದರು. ಚಡಚಣ ಗ್ಯಾಂಗಿನ ವಿಮಲಾಬಾಯಿ ಸಹೋದರ ಮಲ್ಲಿಕಾರ್ಜುನ ಪದಮಗೊಂಡನಿಂದಲು ಅಸಮಧಾನ ಹೊರಬಂದಿದೆ. ಇನ್ನೂ ಕೊನೆಗೆ ಎಡಿಜಿಪಿ ಸಾಹೇಬ್ರು ಹೇಳಿದಂತೆ ನಡೆದುಕೊಳ್ತೀವಿ ಎಂದು ಚಡಚಣ ಕುಟುಂಬಸ್ಥರು ಮಾತು ನೀಡಿದರು.
ಅಲ್ಲದೇ, ಮುಂದೆ ಎರಡು ಕುಟುಂಬಗಳು ದ್ವೇಷ ಸಾಧಿಸೋದಿಲ್ಲ. ಒಗ್ಗಟ್ಟಾಗಿ ಇರುತ್ತೇವೆ ಎಂದು ಎರಡು ಕುಟುಂಬ ಸದಸ್ಯರು ತದ್ದೇವಾಡಿ ಸ್ವಾಮೀಜಿ ಹಾಗೂ ಹತ್ತಳ್ಳಿ ಸ್ವಾಮೀಜಿ ಎದುರು ಹೇಳಿದರು. ಸದ್ಯಕ್ಕೆ ಎರಡು ಗ್ಯಾಂಗಿನ ನಡುವೆ ಶಾಂತಿ-ಸೌಹಾರ್ದತೆ ಮೂಡಿಸಿಲು ನಡೆಸಿದ ಪೊಲೀಸರ ಪ್ರಯತ್ನ ಯಶಸ್ವಿಯಾಗಿದೆ. ಈ ವೇಳೆ ಎಸ್ಪಿ ಎಚ್ ಡಿ ಆನಂದಕುಮಾರ, ಉತ್ತರ ವಲಯ ಐಜಿಪಿ, ಹಿರಿಯ-ಕಿರಿಯ ಪೊಲೀಸರು ಹಾಗೂ ಬಾಗಲಕೋಟ ಎಸ್ಪಿ ಜಯಪ್ರಕಾಶ್, ಇಂಡಿ ಡಿವಾಯಎಸ್ಪಿ ಚಂದ್ರಶೇಖರ ನಂದರೆಡ್ಡಿ ಸಿಪಿಐ ಸಾಹೇಬಗೌಡ ಪಾಟಿಲ ಪಿಎಸೈ ಸಂಜೀವ ತಿಪ್ಪರೆಡ್ಡಿ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.