ಭೀಮಾತೀರದಲ್ಲಿ ಮಾವಾ ಅಡ್ಡಾ ಮೇಲೆ ದಾಳಿ ಮೂವರ್ ಬಂಧನ..!
ಚಡಚಣ : ಅಕ್ರಮವಾಗಿ ಮಾವಾ ತಯಾರಿಕಾ ಅಡ್ಡೆಯ ಮೇಲೆ ಸಿಪಿಐ ಎಸ್ ಎಮ್ ಪಾಟೀಲ ನೇತೃತ್ವದಲ್ಲಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ನೂತನ ಚಡಚಣ ತಾಲೂಕಿನ ಉಮದಿ ರಸ್ತೆಯಲ್ಲಿ ನಡೆದಿದೆ. ಬಿಜೆಪಿ ಮಾಜಿ ಮಂಡಳ ಅಧ್ಯಕ್ಷ ರಾಮಣ್ಣ ಅವಟಿ, ಸಂತೋಷ ಅವಟಿ, ಮಲ್ಲಿಕಾರ್ಜುನ ಖೇಡ, ಅರುಣ್ ಬನಸೋಡೆ ವಿರುದ್ಧ ಕೇಸ್ ದಾಖಲಾಗಿದೆ. ಅಕ್ರಮವಾಗಿ ಉಮದಿ ರಸ್ತೆಯ ಪಕ್ಕದ ಪತ್ರಾಸ್ ಶೆಡ್ ನಲ್ಲಿ ಅಕ್ರಮವಾಗಿ ಮಾವಾ ತಯಾರಿಸುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು 36 ಸಾವಿರ ಮೌಲ್ಯದ ವಿವಿಧ ವಸ್ತುಗಳು ಹಾಗೂ ಮಷೀನ್ಗಳನ್ನು ಜಪ್ತಿಗೈದಿದ್ದಾರೆ. ಈ ಕುರಿತು ಚಡಚಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.