ಎಸ್ ಎಸ್ ಪ್ಯಾರಾಮೆಡಿಕಲ್ ಕಾಲೇಜು ಹಾಗೂ ಎಕ್ಸಲೆಂಟ್ ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ…!
ಕಣ್ಣಂಚಲಿ ನೀರು ತರಿಸಿದ ಮಕ್ಕಳು ಬಾಲ್ಯ ವಿವಾಹ ಕಿರುನಾಟಕ..!
ಇಂಡಿ : ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಸರ್ವತೋಮುಖ ಅಭಿವೃದ್ಧಿ ಪ್ರಗತಿಯ ಜ್ಞಾನ ನೀಡಬೇಕು ಎಂದು ಜಿಲ್ಲಾ ರೈತ ಮೂರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು. ಇಂಡಿ ಪಟ್ಟಣದ ಪ್ರತಿಷ್ಠಿತ ಎಸ್ ಎಸ್ ಪ್ಯಾರಾಮೆಡಿಕಲ್ ಕಾಲೇಜು ಹಾಗೂ ಎಕ್ಸಲೆಂಟ್ ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯಲ್ಲಿ ಹಮ್ಮಿಕೊಂಡ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನದಲ್ಲಿ ಕೇವಲ ಸಂಘ-ಸಂಸ್ಥೆಗಳು ಹಣ ಮಾಡಲು ಹೋರಟಿವೆ. ಆದರೆ ಈ ಸಂಸ್ಥೆ ದುಡ್ಡು ಮಾಡಲು ಬಯಸದೆ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಉಪನ್ಯಾಸ ನೀಡಲು ಆಗಮಿಸಿದ ಪ್ರಾಚಾರ್ಯ ಎ.ಆರ್ ಹೆಗ್ಗಣದೊಡ್ಡಿ ಮಾತಾನಾಡಿ, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ 5ನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಅಂದಾಗ ಮಾತ್ರ ಮಕ್ಕಳು ಸಂಸ್ಕಾರವಂತರು ಮತ್ತು ಜ್ಞಾನವಂತರಾಗುತ್ತಾರೆ ಎಂದು ಹೇಳಿದರು. ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಕಳುಹಿಸಿ ಅವರಿಗೆ ಜ್ಞಾನ ಸಿಗದಂತೆ ಮಾಡುತ್ತಿದ್ದೇವೆ. ಹೀಗಾಗಿ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಸಂಸ್ಕಾರದ ಜೊತೆಗೆ ಶಿಕ್ಷಣವು ಸಿಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಥೋಡ್ ಮಾತನಾಡಿ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವುದನ್ನು ಬಿಡಬೇಕು ಮನೆಯಲ್ಲಿ ಪಾಲಕರು ಸಹ ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡಿ ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಪಾಠ ಪ್ರವಚನ ಆಲಿಸಲು ತಿಳಿಸಬೇಕು ಎಂದು ವಿನಂತಿಸಿದರು.
ಶಾಲಾ – ಕಾಲೇಜು ಮಕ್ಕಳಿಂದ ವಿಶೇಷ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅದರಲ್ಲಿ ಬಾಲ್ಯ ವಿವಾಹ ಕಿರುನಾಟಕ ನೋಡುಗರ ಕಣ್ಣಲ್ಲಿ ನೀರು ಹರಿಸಿತು. ಹಾಗೇ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನ ಸನ್ಮಾನಿಸಲಾಯಿತು.
ಇನ್ನೂ ಸಾನಿಧ್ಯ ವಹಿಸಿದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ ಈ ಸಂಸ್ಥೆ ಅತಿ ಕಡಿಮೆ ಅವಧಿಯಲ್ಲಿಯೇ ಉತ್ತಮ ಹಾಗೂ ಉತ್ಕೃಷ್ಟವಾಗಿ ಬೆಳೆದಿದೆ. ಇದರ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಲಾಭ ಬಯಸದೆ ಮಕ್ಕಳಿಗೆ ಅತಿ ಕಡಿಮೆ ಹಣದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ ಎಸ್ ಬಿ. ಕೆಂಬೊಗಿ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಪರಿಷತ್ತ ಅಧ್ಯಕ್ಷ ಶರಣು ಸಬರದ, ಸಹ ಪ್ರಾಧ್ಯಾಪಕ ಎನ್ ಪಿ ಕೋಟಿ, ಪತ್ರಕರ್ತ ಉಮೇಶ ಬಳಬಟ್ಟಿ, ತಾ.ಪಂ ಮಾಜಿ ಸದಸ್ಯ ಧರ್ಮರಾಜ ವಾಲಿಕಾರ, ಉದ್ದಿಮೆದಾರ ಸಂಗಮೇಶ ಬಿರಾದಾರ ವೇದಿಕೆಯಲ್ಲಿ ಮತ್ತಿತರರಿದ್ದರು.