ಪಾಳು ಬಾವಿಗೆ ಬಿದ್ದ ಎಮ್ಮೆಯನ್ನು ರಕ್ಷಿಸಿದ ಅಗ್ನಿ ಶಾಮಕ ಸಿಬ್ಬಂದಿ..!
ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ:
ಆಯಾ ತಪ್ಪಿ ಬಿದ್ದ ಎಮ್ಮೆಯ ರಕ್ಷಣೆ..!
ಗ್ರಾಮಸ್ಥರ ಕರೆಗೆ ಓಗೊಟ್ಟು ಧೌಡಾಯಿಸಿದ ಅಧಿಕಾರಿಗಳು..
ರೈತನ ಮೊಗದಲ್ಲಿ ಮಂದಹಾಸ..!
ಇಂಡಿ : ಜಮೀನುವೊಂದರ ಹಳೆಯ ಪಾಳು ಬಾವಿಗೆ ಬಿದ್ದ ಎಮ್ಮೆಯನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ನಡೆದಿದೆ.
ತಾಲ್ಲೂಕಿನ ಕ್ಯಾತನಕೇರಿ ಗ್ರಾಮದಲ್ಲಿ ಸಂತೋಷ ಬಸಪ್ಪ ಕೆಂಬೋಗಿ ಎಂಬುವರಿಗೆ ಸಂಬಂಧಿಸಿದ ಎಮ್ಮೆಯು ಮೇಯಲು ಹೋಗಿ ಆಯಾ ತಪ್ಪಿ, ಪಾಳು ಭಾವಿಯಲ್ಲಿ ಬಿದ್ದಿತ್ತು.
ವಿಷಯ ತಿಳಿದ ತಕ್ಷಣ ಸ್ಥಳೀಯರು ಆಗ್ನಿ ಶಾಮಕ ದಳದವರಿಗೆ ಕರೆ ಮಾಡಿ ಮಾಹಿತಿ ರವಾನಿಸಿದ್ದರು. ಇನ್ನು ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿಗಳು ದೌಡಾಯಿಸಿದ ಅರ್ಧ ಘಂಟೆ ಕಾರ್ಯಾಚರಣೆ ನಡೆಸಿ ಎಮ್ಮೆಯನ್ನು ಮೇಲೆ ತೆಗೆದಿದ್ದಾರೆ. ಗ್ರಾಮಸ್ಥರ ಕರೆಗೆ ಸ್ಪಂದಿಸಿ ಮೂಕ ಜೀವಿಯ ಜೀವ ಉಳಿಸಿದ ಅಗ್ನಿಶಾಮಕ ಸಿಬ್ಬಂದಿಗಳಿಗೆ ಸ್ಥಳೀಯರು ಅಭಿನಂದನೆ ಸಲ್ಲಿದ್ದಾರೆ.
ಈ ಸಂದರ್ಭದಲ್ಲಿ ಎ ಎಸ್ ಒ ದೇವದಾನಮ್ಮ, ಎಲ್ ಎಪ್ ಕೆ. ಬಿ ಚೆಣ್ಣ, ಎಪ್ ಡಿ ರವಿ ರಾಠೋಡ, ಎಪ್ ಎಮ್ ಸಂತೋಷ ಬಗಲಿ, ಶರಣು ಹೊನವಾಡ, ವಿಶ್ವನಾಥ ಗೊಡ್ಯಾಹಾಳ, ಅಲೀ ಬಂಥನಾಳ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಯಶಸ್ವಿಯಾದರು. ಅವರ ಸಾಹಸಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಅಶೋಕ ಹಿರೇಕುರಬರ್, ಬೀರಪ್ಪ ಹಿರೇಕುರಬರ್, ಗೇಮು ಚವ್ಹಾಣ, ಪರಪ್ಪ ಕೆಂಬೋಗಿ, ಪರಶುರಾಮ ತಡ್ಲಗಿ, ವೆಂಕಟೇಶ ಚವ್ಹಾಣ, ಹಣಮಂತ ವನಂಜಕರ, ಅಶೋಕ ಚವ್ಹಾಣ, ಸಚೀನ್ ಚವ್ಹಾಣ ,ಬಾಸು ಚವ್ಹಾಣ ಇನ್ನೂ ಅನೇಕರು ಉಪಸ್ಥಿತರಿದ್ದರು.