ಇಂಡಿ : ಅಲೆಮಾರಿ, ಅರೆ ಅಲೆಮಾರಿ ಚನ್ನ ದಾಸರ ಸೇವಾ ಸಮಿತಿ ಐಕ್ಯತಾ ಸಮಾವೇಶ ಹಾಗೂ ತಾಲ್ಲೂಕು ತಳವಾರ ಸಮಾಜದ ಆಶ್ರಯದಲ್ಲಿ ಅಭಿನಂದನಾ ಸಮಾರಂಭಕ್ಕೆ ಸಮಾಜ ಕಲ್ಯಾಣ ಸಚಿವ ಕೋಟ್ ಶ್ರೀನಿವಾಸ ಪೂಜಾರಿ ಅವರು ಇಂದು ಪಟ್ಟಣಕ್ಕೆ ಆಗಮನ ಮಾಡಲಿದ್ದಾರೆ ಎಂದು ಜಿಲ್ಲಾ ರೈತ ಮೂರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಪತ್ರಿಕಗೆ ಮಾಹಿತಿ ನೀಡಿದರು.
ಹೌದು ಇಂಡಿ ಪಟ್ಟಣದಲ್ಲಿ ಬೆಳಿಗ್ಗೆ ೧೧ ಘಂಟೆಗೆ ಸಿಂದಗಿ ರಸ್ತೆಯ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಐಕ್ಯತಾ ಸಮಾವೇಶ ನಡೆಯಲಿದ್ದು, ಮಧ್ಯಾಹ್ನ ೩:೩೦ ಕ್ಕೆ ವಿಜಯಪುರ ರಸ್ತೆಯ ಶಂಕರ್ ಪಾರ್ವತಿ ಪಂಕ್ಚನ್ ಹಾಲನಲ್ಲಿ ಅಭಿನಂದನಾ ಕಾರ್ಯಕ್ರಮ ಜರಗುವುದು ಎಂದು ಹೇಳಿದರು. ತದನಂತರ ಸಾಯಂಕಾಲ ಲಚ್ಯಾಣ ಗ್ರಾಮಕ್ಕೆ ಸಮಾಜ ಕಲ್ಯಾಣ ಸಚಿವರು ತೆರಳುತ್ತಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಲು ಕರೆ ನೀಡಿದರು.
ಸಂಸದ ರಮೇಶ್ ಜಿಗಜಿಣಿಗಿ, ಸಚಿವ ಗೋವಿಂದ ಕಾರಜೋಳ ಹಾಗೂ ಪಕ್ಷದ ಜಿಲ್ಲಾ, ತಾಲ್ಲೂಕು ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.