ಇಂಡಿ : ತಾಲ್ಲೂಕಿನ ತಳವಾರ ಸಮಾಜ ಸೇವಾ ಸಂಘದಿಂದ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷ ಧರ್ಮರಾಜ ವಾಲಿಕಾರ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತಾನಾಡಿದ ಅವರು, ರವಿವಾರ, ದಿನಾಂಕ ೦೮/೦೧/೨೦೨೩ ರ ಮಧ್ಯಾಹ್ನ ೩ ಘಂಟೆಗೆ ಶಂಕರ್ ಪಾರ್ವತಿ ಪಂಕ್ಚನ್ ಹಾಲನಲ್ಲಿ ಸಮುದಾಯದ ವತಿಯಿಂದ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದು ತಾಲ್ಲೂಕಿನ ತಳವಾರ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಭೀಮಣ್ಣ ಕೌಲಗಿ, ಗೌರವ ಅಧ್ಯಕ್ಷ ಅನೀಲ ಜಮಾದಾರ, ಅಡ್ವಕೇಟ್ ಎಸ್ ಜೆ ವಾಲಿಕಾರ, ಡಾ. ಶ್ರೀಶೈಲ ಕೋಳಿ, ಗ್ರಾ.ಪ. ಅಧ್ಯಕ್ಷ ರವಿ ವಗ್ಗೆ , ಅಂಬರೀಶ್ ಕೊರಳ್ಳಿ, ಪ್ರಭು ವಾಲಿಕಾರ ಹಾಗೂ ಸಮುದಾಯದ ಅನೇಕ ಮುಖಂಡರು ಉಪಸ್ಥಿತರಿದ್ದರು.