ಇಂಡಿ : ತಾಲೂಕಿನ ತಾಂಬಾ ಗ್ರಾಮದ ಸರ್ವ ಸಮುದಾಯದ ಸೇರಿ ಅಗಲಿದ ಸರಳತೆಯ ಸಾಕಾರ ಮೂರ್ತಿ, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ಭಾವಪೂರ್ಣ ಶೃಂದ್ಧಾಂಜಲಿ ಸಲ್ಲಿಸಿದರು.
ಈ ವೇಳೆ ತಮ್ಮ ನುಡಿ ನಮನ ಸಲ್ಲಿಸಿ ಸಾಮಾಜಿಕ ಹೋರಾಟಗಾರ ಕರವೇ ಅಧ್ಯಕ್ಷ ಶಿವರಾಜ್ ಕೆಂಗನಾಳ ಮಾತನಾಡಿ ದಕ್ಷಿಣಕ್ಕೆ ಸಿದ್ದಗಂಗಾ, ಉತ್ತರಕ್ಕೆ ಜ್ಞಾನ ಯೋಗಾಶ್ರಮ ಅಂತಾ ಹೇಳಬಹುದು. ಯಾಕೆಂದರೆ ಮಣಿ ಮಾಲೆ, ಸಿಲುಬೇ, ಟೋಪಿ ಹಾಕಿದರೇನು ಸಂತ ಎಂದರೆ ಯಾರು ಎಂದು ಇಡೀ ಮನುಕುಲಕ್ಕೆ ನಡೇ ನುಡಿಯ ಮುಖಾಂತರ ತೋರಿಸಿ ನಮ್ಮ ಬಾಳಿಗೆ ಬೆಳಕು ತಂದವರು ಸಿದ್ದೇಶ್ವರ ಶ್ರೀಗಳು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಗ್ರಾಮದ ಹಿರಿಯ ಮುಖಂಡರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ನುಡಿ ನಮನ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಕ್ಯಾಂಡಲ್ ಬೆಳಗಿದರು.