ಅಫಜಲಪುರ: ತಾಲೂಕಿನ ಶ್ರೀ ಕ್ಷೇತ್ರ ಮಣ್ಣೂರ ಗ್ರಾಮದ ಶ್ರೀ ವೇದೇಶ ತೀರ್ಥ ವಿದ್ಯಾ ಪೀಠದಲ್ಲಿ ದಿನಾಂಕ 12 ಹಾಗೂ 13 ರಂದು ಉತ್ತರಾದಿ ಮಠಾಧೀಶರಾದ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಜನ್ಮ ಸುವರ್ಣ ಸಂಭ್ರಮ 6 ನೇ ಶ್ರೀಮನ್ಯಾಯ ಸುಧಾಮಂಗಳ ಮಹೋತ್ಸವ ಹಾಗೂ ವೇದೇಶ ತೀರ್ಥ ವಿದ್ಯಾಪೀಠದ ಕುಲಪತಿಗಳಾದ ಪಂಡಿತ ಅನಂತಾಚಾರ್ಯ ಅಕಮಂಚಿ ಅವರ ಷಷ್ಠಬ್ದ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
12 ರಂದು ಬೆಳಿಗ್ಗೆ 6 ಗಂಟೆಗೆ ಆದ್ಯ ಕೃಷ್ಣದ್ವೈಪಾಯನಾಚಾರ್ಯರಿಂದ ಪ್ರತಿಷ್ಠಾಪಿತವಾದ ಶ್ರೀ ಪ್ರಾಣ ದೇವರ ದೇವಸ್ಥಾನ ಜೀರ್ಣೋದ್ಧಾರಗೊಂಡಿದ್ದು ಶ್ರೀ ಪ್ರಾಣ ದೇವರ ದೇವಸ್ಥಾನ ಕಟ್ಟಡ ಹಾಗೂ ಶ್ರೀ ಪ್ರಾಣ ದೇವರ ಪುನಃ ಪ್ರತಿಷ್ಠಾಪನೆ ಕಾರ್ಯಕ್ರಮ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ನೆರವೇರಲಿದೆ.
8 ಗಂಟೆಯಿಂದ ಸುಧಾ ವಿದ್ಯಾರ್ಥಿಗಳಿಂದ ಶ್ರೀ ಮನ್ಯಾಯಸುಧಾ ಅನುವಾದ, ನಂತರ ಸನ್ನಿಹಿತರಾದ ಶ್ರೀಪಾದಂಗಳವರ ಅನುಗ್ರಹ ಸಂದೇಶ, ಸಂಸ್ಥಾನ ಪೂಜೆ ತೀರ್ಥ ಪ್ರಸಾದ ಸಾಯಂಕಾಲ 4-30 ರಿಂದ 6 ಗಂಟೆಯವರೆಗೆ ಮೈಸೂರು ರಾಮಚಂದ್ರಾಚಾರ್ಯ ಅವರಿಂದ ದಾಸವಾಣಿ ಕಾರ್ಯಕ್ರಮ ನಂತರ ಸನ್ಮಾನ ಸಮಾರಂಭ ಜರುಗುವುದು.
13 ರಂದು ಪಂಡಿತ ಅನಂತಾಚಾರ್ಯ ಅಕಮಂಚಿ ಅವರ ಷಷ್ಠಬ್ದ ಮಹೋತ್ಸವ, ಹವನಗಳ ಪೂರ್ಣಾಹುತಿ, ತುಲಾಭಾರ, ವಿದ್ವಾಂಸರಿಂದ ಆಶೀರ್ವಾದ ಪಂಡಿತ ಅನಂತಾಚಾರ್ಯ ಅಕಮಂಚಿ ಅವರಿಂದ ಶ್ರೀಮನ್ಯಾಯ ಸುಧಾಮಂಗಳ ಅನುವಾದ,ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ಜನ್ಮ ಸುವರ್ಣ ನಿಮಿತ್ತ ಗುರುವಂದನಾ ಕಾರ್ಯಕ್ರಮ ವ್ಯಾಸ ಪೂಜೆ ನಂತರ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಶ್ರೀ ರಘುವಿಜಯ ತೀರ್ಥ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರ ಹಾಗೂ ಈಶ ಪ್ರಿಯ ತೀರ್ಥ ಶ್ರೀಪಾದಂಗಳವರ ಫಲಿಮಾರು ಮಠದ ಉತ್ತರಾಧಿಕಾರಿ ಶ್ರೀ ವಿದ್ಯಾ ರಾಜೇಶ್ವರ ತೀರ್ಥ ಶ್ರೀಪಾದಂಗಳವರ ಅನುಗ್ರಹ ಸಂದೇಶ, ಸಂಸ್ಥಾನಗಳ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಸದರಿ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಸಚಿವರಾದ ಮುರುಗೇಶ ನಿರಾಣಿ, ಹಾಗೂ ಬಿ ಸಿ ನಾಗೇಶ, ಅಫಜಲಪುರ ಶಾಸಕ ಎಂ ವೈ, ಪಾಟೀಲ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಗ್ರಾಮದ ಮುಖಂಡರು ಗ್ರಾ,ಪಂ, ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಭಾಗವಹಿಸಲಿದ್ದಾರೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ವೇದೇಶ ತೀರ್ಥ ಶ್ರೀ ಮಾಧವತೀರ್ಥ ಟ್ರಸ್ಟ್ ಕಮೀಟಿಯವರು ತಿಳಿಸಿದ್ದಾರೆ.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.