3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ
ಲಿಂಗಸಗೂರು: ಮೊಹರಂ ಹಬ್ಬದ ಪ್ರಯುಕ್ತ ನಾಗರಹಾಳ ಗ್ರಾಮದ 3 ನೇ ವರ್ಷದ ಹೆಜ್ಜೆ ಮೇಳಕ್ಕೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮಾವಿನಭಾವಿಯ ಬಸವರಾಜ ಸಿದ್ದಪ್ಪ ಅಜ್ಜನವರು ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದರು. ಈ ವೇಳೆ ಶ್ರೀಗಳು ಮಾತನಾಡಿ ಅಲಾಯಿ ಹಬ್ಬ ಅಂದ್ರೆ ಸರ್ವ ಜನಾಂಗದವರನ್ನು ಒಗ್ಗೂಡಿಸುವ ಭಕ್ತಿಯ ಸ್ಥಳ. ಯುವಕರು ಹೆಜ್ಜೆ ಹಾಡುವದರಿಂದ ಆರೋಗ್ಯ ಚೆನ್ನಾಗಿರುತ್ತದೆ.
ಭಕ್ತಿಯಿಂದ ನಾವು ನಡೆದರೆ ಆ ಆಲಂ ದೇವರುಗಳು ಬಡ್ಡಿ ಸಮೇತ ಹಿಂದುರಿಗಿಸುತ್ತವೆ. ಯುವಕರ ಉತ್ಸಾಹಕ್ಕೆ ಹೆಜ್ಜೆ ಕುಣಿತ ಒಂದು ಪ್ರೇರಣೆಯಾಗಿದೆ ಎಂದು
ಆಶೀರ್ವಾಚನ ನೀಡಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರುಗಳಾದ ಸಯ್ಯದ್ ಅಲ್ತಾಫ್ ಪೀರಾ, ಕಾಂಗ್ರೆಸ್ ಮುಖಂಡ ಹೊನ್ನಪ್ಪ ಜಿ ಮೇಟಿ, ಮೌಲಾಸಾಬ್ ಮುತ್ಯಾ, ಶಿವರಾಜ್ ಬುಕ್ ಸ್ಟಾಲ್, ಬಸನಗೌಡ ಪಾಟೀಲ್, ಯಮನೂರ ಬನ್ನಿಕಟ್ಟಿ ಸ್ಥಳೀಯರು ಉಪಸ್ಥಿತರಿದ್ದರು.


















