ಖಿಲಾರಹಟ್ಟಿ ಜಾತ್ರೆಯಲ್ಲಿ ‘ಶ್ರೀ ಮಹಿಮಾಂತಕ ಮನ್ನೀರೇಶ್ವರ’ ಕೃತಿ ಲೋಕಾರ್ಪಣೆ
ಮುದ್ದೇಬಿಹಾಳ: ತಾಲೂಕಿನ ಖಿಲಾರಹಟ್ಟಿ ಗ್ರಾಮದ ಆರಾಧ್ಯ ದೈವಗಳಾದ ಶ್ರೀ ಭೀರಲಿಂಗೇಶ್ವರ ಹಾಗೂ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಪವಿತ್ರ ವೇದಿಕೆಯಲ್ಲಿ, ಯುವ ಲೇಖಕ ವಿರೇಶ ಗೂಡಲಮನಿ ರಚಿಸಿದ “ಶ್ರೀ ಮಹಿಮಾಂತಕ ಮನ್ನೀರೇಶ್ವರ” ಕೃತಿಯನ್ನು ಶಾಸಕ ಸಿ.ಎಸ್. ನಾಡಗೌಡರು ಲೋಕಾರ್ಪಣೆಗೊಳಿಸಿದರು.
ಸಂಸ್ಕೃತಿ ಉಳಿಸುವ ಪ್ರಯತ್ನ:
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕರು ಹಾಗೂ ಕೆಎಸ್ಡಿಎಲ್ ಅಧ್ಯಕ್ಷರಾದ ಸಿ.ಎಸ್. ನಾಡಗೌಡರು, “ನಮ್ಮ ಮಣ್ಣಿನ ಇತಿಹಾಸ ಮತ್ತು ಜನಪದ ಸೊಗಡನ್ನು ಅಕ್ಷರ ರೂಪಕ್ಕಿಳಿಸಿ ಮುಂದಿನ ಪೀಳಿಗೆಗೆ ದಾಟಿಸುತ್ತಿರುವ ವಿರೇಶ ಗೂಡಲಮನಿ ಅವರ ಸಾಹಿತ್ಯಿಕ ಸೇವೆ ಶ್ಲಾಘನೀಯ. ಜಾತ್ರೆಯಂತಹ ಸಡಗರದ ನಡುವೆ ಇಂತಹ ಮೌಲಿಕ ಕೃತಿ ಬಿಡುಗಡೆಯಾಗಿರುವುದು ಅರ್ಥಪೂರ್ಣ,” ಎಂದರು.
ಲೇಖಕರ ಮನದಾಳ:
ಇದೇ ಸಂದರ್ಭದಲ್ಲಿ ಲೇಖಕ ವಿರೇಶ ಗೂಡಲಮನಿ ಮಾತನಾಡಿ, “ನಮ್ಮೂರಿನ ಸಮೃದ್ಧ ಇತಿಹಾಸ ಹಾಗೂ ಶ್ರೀಮಂತ ಜನಪದ ಹಿನ್ನೆಲೆಯನ್ನು ಆಧರಿಸಿ ಈ ಕೃತಿಯನ್ನು ರಚಿಸಲಾಗಿದೆ. ಈ ಕೃತಿ ಲೋಕಾರ್ಪಣೆಯಾಗಲು ಹಾಗೂ ನನ್ನ ಈ ಸಾಹಿತ್ಯಿಕ ಪ್ರಯತ್ನಕ್ಕೆ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ನೀಡಿದ ಸಮಾಜಸೇವಕ ಎಂ.ಎನ್. ಮದರಿ ಸಾಹೇಬರಿಗೆ ನಾನು ಸದಾ ಋಣಿ. ಹಾಗೆಯೇ ಊರಿನ ಪ್ರತಿಯೊಬ್ಬ ಹಿರಿಯರು ಹಾಗೂ ಯುವಕರ ಪ್ರೋತ್ಸಾಹದಿಂದ ಇಂದು ಈ ಕಾರ್ಯ ಯಶಸ್ವಿಯಾಗಿದೆ,” ಎಂದು ಭಾವುಕರಾಗಿ ನುಡಿದರು.
ಪೂಜ್ಯರ ಆಶೀರ್ವಚನ:
ಕಾರ್ಯಕ್ರಮದಲ್ಲಿ ಅಗತೀರ್ಥದ ಜಗದ್ಗುರು ರೇವಣಸಿದ್ದೇಶ್ವರ ಶಾಂತಮಯ ಶ್ರೀಗಳು, ತಾಳಿಕೋಟೆಯ ಸಿದ್ದಲಿಂಗ ದೇವರು, ಸಿದ್ದನಕೊಳ್ಳದ ಡಾ. ಶಿವಕುಮಾರ ಶ್ರೀಗಳು, ಅಂಕಲಿಮಠದ ವೀರಭದ್ರ ಮಹಾಸ್ವಾಮಿಗಳು, ಯರಝರಿಯ ಮಲ್ಲಾರಲಿಂಗ ಪ್ರಭುಗಳು, ಸರೂರಿನ ಶಿವಯ್ಯ ಗುರುವಿನವರು, ಖಿಲಾರಹಟ್ಟಿಯ ರಮಾನಂದ ಸ್ವಾಮೀಜಿ ಸೇರಿದಂತೆ ಹತ್ತಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡು ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದ
ವೇದಿಕೆಯಲ್ಲಿ ಜಾತ್ರೆ ಕಮೀಟಿ ಅಧ್ಯಕ್ಷ ಎನ್ ಎಸ್ ಪೂಜಾರಿ,
ಮಾಜಿ ಜಿಲ್ಲಾ ಪಂ ಅಧ್ಯಕ್ಷ ಗಂಗಾಧರ ನಾಡಗೌಡ (ಮುನ್ನಾಧಣಿ)
ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ವೈ.ಎಚ್. ವಿಜಯಕರ್, ಬಿ ಕೆ ಬಿರಾದಾರ,ಕೆ.ಆರ್. ಬಿರಾದಾರ, ಎನ್.ಎಸ್. ಪಾಟೀಲ
ಬಪ್ಪರಗಿ, ಬಿ.ಎಸ್. ಶಿರೋಳ, ಬಿ.ಜಿ. ಜಗ್ಗಲ್, ಶ್ರೀದೇವಿ ಮದರಿ, ಸಂಗಮ್ಮ ದೇವರಳ್ಳಿ,ಕಿರಣ ಮದರಿ,ರವಿ ಜಗಲಿ,ಶಶಿ ನೆರಬೆಂಚಿ, ಬಸವರಾಜ ಗುಡ್ಲಮನಿ, ಹಾಗೂ ಗ್ರಾಮದ ಹಿರಿಯರು ಸೇರಿದಂತೆ ಉಪಸ್ಥಿತರಿದ್ದರು.



















