ಕೊಟ್ಟ ಹಣ ಮರಳಿ ಬಾರದ್ದರಿಂದ ಮನನೊಂದು ಆತ್ಮಹತ್ಯೆ
ಇಂಡಿ : ಕೊಟ್ಟ ಹಣ ಮರಳಿ ಬರದಿದ್ದಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ತಡವಲಗಾ ಗ್ರಾಮದಲ್ಲಿ ನಡೆದಿದೆ.
ಕುಪೇಂದ್ರ ಮಳಸಿದ್ದಪ್ಪ ಮದರಿ ( ೫೨) ಮೃತಪಟ್ಟ ದುರ್ದೈವಿ.
ಕುಪೆಂದ್ರ ಮದರಿ ಇವರು ಇಂಡಿ ತಾಲೂಕಿನ ನಾದ ಗ್ರಾಮದ ಆನಂದ ನ್ಯಾಮಗೌಡ ಅವರ ಒಡೆತನದ ನಾದ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
ಕೈಗಡವಾಗಿ ಗೆಳೆಯರಿಗೆ ಸಾಕಷ್ಟು ಪ್ರಮಾಣದಲ್ಲಿ ಹಣ ನೀಡಿದ್ದರು.ಆದರೆ ಆ ಹಣ ಸಕಾಲಕ್ಕೆ ಬಾರದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ತಡವಲಗಾ ಗ್ರಾಮದ ಹೊರವಲಯದಲ್ಲಿ ಇರುವ ಪ್ರಕಾಶ ಚಂದ್ರಶೇಖರ ಹೂಗಾರ ಎಂಬುವರ ತೋಟದಲ್ಲಿ ಹುಣಸಿನ ಮರಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ.
ಈ ಕುರಿತು ಹೋರ್ತಿ ಪೋಲಿಸಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















