ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ; ₹ 50 ಸಾವಿರ ದಂಡ
ಲಿಂಗಸಗೂರು: ಲಿಂಗಸಗೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಯರಡೋಣ ನಿವಾಸಿಯಾದ ವಿಜಯಲಕ್ಷ್ಮೀ @ ಗಿರಿಜಮ್ಮ ಗಂಡ ಸೋಮಪ್ಪ ಬಿಂಗಿ ಈಕೆಯು ತನ್ನ ಗಂಡ ಮೃತಪಟ್ಟ ನಂತರ ತನ್ನ ತಾಯಿಯು ತವರು ಮನೆಯಾದ ಯರಡೋಣ ಗ್ರಾಮದಲ್ಲಿ ವಾಸವಾಗಿದ್ದು ಆಗ ಆರೋಪಿ ದೇವರಾಜ @ ದೇವಣ್ಣ ತಂದೆ ಯಲ್ಲಪ್ಪ ಅನ್ವರಿ ಸಾಕೀನ ಯರಡೋಣ ಈತನು ಆಕೆಯೊಂದಿಗೆ ಸಲುಗೆ ಬೆಳೆಸಿ ಅಕ್ರಮ ಸಂಬಂಧ ಹೊಂದಿದ್ದು ದಿನಾಂಕ:10-03-2024 ರಂದು ಅಮವಾಸ್ಯೆ ಇದ್ದ ಪ್ರಯುಕ್ತ ಆರೋಪಿತನು ಆಕೆಯೊಂದಿಗೆ ಛತ್ತರದ ಹನಮಪ್ಪ ದೇವರಿಗೆ ಹೋಗಿ ಮರಳಿ ಲಿಂಗಸುಗೂರಿಗೆ ಬಂದು ಲಿಂಗಸುಗೂರು ಬಸ್ ನಿಲ್ದಾಣದ ಹಿಂದೆ ಇರುವ ಹಳ್ಳದ ದಂಡೆಯ ಮೇಲೆ ಬೆಳೆದಿರುವ ಜಾಲಿಗಿಡಗಳ ಪೊದೆಯಲ್ಲಿ ಕರೆದುಕೊಂಡು ಹೋಗಿ ವಿಜಯಲಕ್ಷ್ಮಿಗೆ ತನ್ನೊಂದಿಗೆ ಮಲಗುವಂತೆ ಒತ್ತಾಯಿಸಿದಾಗ ಆಕೆಯು ಈ ದಿನ ಅಮವಾಸ್ಯೆ ಇದೆ ಬೇಡ ಅಂತಾ ಹೇಳಿ ನಿರಾಕರಿಸಿದ್ದಕ್ಕೆ ಆರೋಪಿಯು ಕೊಲೆ ಮಾಡುವ ಉದ್ದೇಶದಿಂದ ಆಕೆಯ ಕಪಾಳಕ್ಕೆ ಹೊಡೆದು, ನೆಲಕ್ಕೆ ಕೆಡವಿ ಕಲ್ಲಿನಿಂದ ಬಲ ಮಲಕಿಗೆ ಹೊಡೆದು ರಕ್ತಗಾಯಗೊಳಿಸಿ ಆಕೆಯು ಹುಟ್ಟುಕೊಂಡ ಸೀರೆಯಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುತ್ತಾನೆ. ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಈ ಪ್ರಕರಣದ ತನಿಖೆಯನ್ನು ಲಿಂಗಸಗೂರು ವೃತ್ತದ ಅಂದಿನ ತನಿಖಾಧಿಕಾರಿಗಳಾದ ಪುಂಡಲಿಕ ಪಟಾತಾರ ಸಿಪಿಐ ಪ್ರಕರಣದ ತನಿಖೆ ಕೈಗೊಂಡು ದೋಷಾರೋಪಣೆ ಪಟ್ಟಿ ಸಲ್ಲಿಸಿರುತ್ತಾರೆ.
ವಾದ ವಿವಾದಗಳನ್ನು ಆಲಿಸಿದ ಮಾನ್ಯ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಲಯ ರಾಯಚೂರು, ಪೀಠಾಸಿನ ಲಿಂಗಸಗೂರು ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ ಜಕಾತಿ ರವರು ದಿನಾಂಕ:07-03-2026 ರಂದು ಆರೋಪಿತನಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ರೂ.50,000/- ದಂಡ ವಿಧಿಸಿ ತಿರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಮಂಜುನಾಥ ಬೇರ್ಗಿ (ಹುಳ್ಳಿಹಾಳ್) ಸರ್ಕಾರಿ ಅಭಿಯೋಜಕರು, ಲಿಂಗಸಗೂರು ರವರು ವಾದ ಮಂಡಿಸಿರುತ್ತಾರೆ ಹಾಗೂ ಶ್ರೀ ನಿಂಗಯ್ಯ ಪಿಸಿ ರವರು ಸಾಕ್ಷಿದಾರರನ್ನು ಸರಿಯಾದ ಸಮಯಕ್ಕೆ ಮಾನ್ಯ ನ್ಯಾಯಾಲಯದಲ್ಲಿ ಹಾಜರುಪಡಿಸಿರುತ್ತಾರೆ.


















