ಅಕ್ರಮ ಅಕ್ಕಿ ಸಾಗಾಟ..! ಅಹಾರ ನೀರಿಕ್ಷಕ ಹಾಗೂ ಪೋಲಿಸರ ದಾಳಿ
ಇಂಡಿ : ಸರ್ಕಾರದ ವಿವಿಧ ಯೋಜನೆಯಡಿ ಬಡವರಿಗೆ ನೀಡುವ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುವ ವೇಳೆ ಆಹಾರ ನಿರೀಕ್ಷಕರು ಹಾಗೂ ಪೊಲೀಸರು ಜಂಟಿಯಾಗಿ ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ನಾದ ಕೆ.ಡಿ ಗ್ರಾಮದಲ್ಲಿ ನಡೆದಿದೆ.
ಮಹಮ್ಮದ್ರಫೀಕ್ ಸುಂಬಡ, ಮೆಹಬೂಬ್ ಸೌದಾಗರ, ಸೈಯದ ಸುಂಬಡ ಬಂಧಿತ ಆರೋಪಿಗಳು. ಇನ್ನು 1.9 ಲಕ್ಷ ಮೌಲ್ಯದ 3780 ಕೆಜಿ, 2 ಲಕ್ಷ ಮೌಲ್ಯದ ಬುಲೆರೋ ಪಿಕ್ಆಪ್ ವಾಹನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, ಮುಂದಿನ ಕಾನೂನುನ್ನು ಪೊಲೀಸರು ಕೈಗೊಂಡಿದ್ದಾರೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















