ವಿಬಿ ಜಿ ರಾಮ್ ಜಿ (ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಗ್ರಾಮೀಣ ಭಾಗದ ಬಡವರನ್ನು ಮೇಲೆತ್ತುವ ಮಹತ್ವದ ಯೋಜನೆ ಯಾಗಿದೆ.ಮಾಜಿ ಶಾಸಕ ನಡಹಳ್ಳಿ.
ಮುದ್ದೇಬಿಹಾಳ: ವಿಬಿ ಜಿ ರಾಮ್ ಜಿ (ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಗ್ರಾಮೀಣ ಭಾಗದ ಬಡವರನ್ನು ಮೇಲೆತ್ತುವ ಮಹತ್ವದ ಯೋಜನೆ ಯಾಗಿದೆ. ಕಾಂಗ್ರೆಸ್ಸಿನವರು ಇದನ್ನು ವಿರೋಧಿಸಲು ಕಾರಣ ತಮ್ಮಪಾಲಿನ ಅನುದಾನ ಕೊಡಲು ಸರ್ಕಾರದ ಹತ್ತಿರ ಹಣ ಇಲ್ಲದಿರುವುದಾಗಿದೆ.
ಈ ಸರ್ಕಾರದ ಇನ್ನೂ ದೊಡ್ಡ ಹಗರಣಗಳು ಶೀಘ್ರ ಹೊರಬರಲಿವೆ. ಎಲ್ಲದರಲ್ಲೂ ಲೂಟಿ ಹೊಡೆದಿದ್ದಾರೆ. ಹಣ ಇಲ್ಲದ ಕಾರಣಕ್ಕೆ ಯೋಜನೆ ಸರಿ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ನಡಹಳ್ಳಿ ದಾಸೋಹ ನಿಲಯದಲ್ಲಿರುವ ಬಿಜೆಪಿ
ಕಾರ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಐಬಿ ಜಿ ರಾಮ್ ಜಿ ಜಾಗೃತಿ ಸಮಾವೇಶ, ಬೂತ್ ಅಧ್ಯಕ್ಷ, ಕಾರ್ಯ ದರ್ಶಿಗಳಿಗೆ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದೆ ಜಾರಿಯಲ್ಲಿದ್ದ ಮಹಾತ್ಮಾ ಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ)ಯಲ್ಲಿ ಲಂಚಾ ವತಾರ, ಭ್ರಷ್ಟಾಚಾರ ಮಿತಿ ಮೀರಿತ್ತು. ಕೇಂದ್ರದ ಅನುದಾನವನ್ನು ಕೊಳ್ಳೆ
ಹೊಡೆಯಲಾಗುತ್ತಿತ್ತು. ಇದನ್ನು ತಡೆಗಟ್ಟುವ ಉದ್ದೇಶದಿಂದ ಮತ್ತು ಗ್ರಾಮೀಣ ಜನರಿಗೆ ಇನ್ನೂ ಹೆಚ್ಚಿನ ಪ್ರಯೋಜನ ದೊರಕಿಸಿಕೊಡುವ ದೃಷ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಜಾರಿಗೊಳಿಸಿದ್ದಾರೆ ಎಂದರು.
ದೇಶದ 2.93 ಲಕ್ಷ ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಈ ಯೋಜನೆಯಡಿ ಒಟ್ಟು 8.45 ಲಕ್ಷ ಕೋಟಿ ಅನುದಾನ ಮೀಸಲಿಡ ಲಾಗಿದೆ. ಇದನ್ನು ವಿಭಜಿಸಿದರೆ ಪ್ರತಿ ಹಳ್ಳಿಗೆ ಕನಿಷ್ಠ 3 ಕೋಟಿ ರೂ ಅನುದಾನ ಸಿಗು ಇದೆ. ಗ್ರಾಪಂನ ಪ್ರತಿ ವಾರ್ಡಗಳನ್ನೂ ಅಭಿವೃದ್ಧಿಪಡಿಸಲು ಅವಕಾಶವಿದೆ. ರಾಜ್ಯ ಸರ್ಕಾರ ಶೇ.40, ಕೇಂದ್ರ ಸರ್ಕಾರ ಶೇ.60 ಅನುದಾನ ಹೂಡಿಕೆ ಸೂತ್ರದಡಿ ಇದು ಜಾರಿಗೊಳ್ಳಬೇಕಾಗಿದೆ. ಆದರೆ ರಾಜ್ಯ
ಸರ್ಕಾರ ತನ್ನ ಪಾಲಿನ ಅನುದಾನ ಕೊಡಲು ಹಿಂದೇಟು ಹಾಕುತ್ತಿರುವುದರ ಹಿಂದಿನ ಮರ್ಮ ಏನು ಅನ್ನೋದು ರಾಜ್ಯದ ಜನರಿಗೆ ಗೊತ್ತಾಗತೊಡಗಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಮುನ್ನಾಧಣಿ ನಾಡಗೌಡ ಅವರು ಮಾತನಾಡಿ, ಎಬಿ ಜಿ ರಾಮ್ ಜಿಯಲ್ಲಿ ರೊಕ್ಕ ಹೊಡೆಯಲು ಸಾಧ್ಯವಾಗುವುದಿಲ್ಲ ಎನ್ನುವ ಸಂಕಟದಿಂದ ಕಾಂಗ್ರೆಸ್ಸಿನವರು ಇದನ್ನು ವಿರೋಧಿಸು ತ್ತಿದ್ದಾರೆ. ಮನರೇಗಾ ಇದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಬಹುದಿತ್ತು. ಆದರೆ ಬೊಟ್ಟಿ ಬಿಲ್ ಮಾಡಿ ಅನುದಾನ ಎತ್ತುವುದು ರೂಢಿಯಾಗಿತ್ತು. ರಾಮ್ ಜಿ ಇದಕ್ಕೆ ಕಡಿವಾಣ ಹಾಕುತ್ತದೆ. ಮಂಡಲ ಮಟ್ಟದಲ್ಲಿ ಜನಸಾಮಾನ್ಯರಿಗೆ ಇದರ ಮಹತ್ವ ತಿಳಿಹೇಳುವ ಕೆಲಸವನ್ನು ಪಕ್ಷದ
ಕಾರ್ಯಕರ್ತರು ಮಾಡಬೇಕು. ಊರು ಅಭಿವೃದ್ಧಿ ಆದರೆ ದೇಶವೂ ಅಭಿವೃದ್ಧಿ ಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆ ಅರ್ ಬಿರಾದಾರ, ಶಿಲ್ಪಾ ಕುದರಗೊಂಡ,
ಮಲೆಕೇಂದ್ರಗೌಡ ಪಾಟೀಲ,
ಸಂಜಯ್ ಪಾಟೀಲ ಕನಮಡಿ, ಶಶಿ ಗುತ್ತನವರ್. ಗುರುನಾಥ ಬಿರಾದಾರ. ಕೆ.ಆರ್.ಬಿರಾದಾರ, ಸಿದ್ದಯ್ಯ ಗುರುವಿನ್, ಸಂಗಮೇಶ ಕರಭಂಟನಾಳ, ಪ್ರೇಮಸಿಂಗ್ ಚವ್ಹಾಣ. ಶ್ರೀಶೈಲ ಮೇಟಿ, ಮಂಜುನಾಥಗೌಡ ಪಾಟೀಲ, ಗಿರೀಶಗೌಡ ಪಾಟೀಲ ಹಿರೇಮುರಾಳ, ಮದನಸ್ವಾಮಿ ಹಿರೇಮಠ, ಶಶಿಧರ ಬೆಣ್ಣೂರ, ದ್ಯಾಮಣ್ಣ ಪಾಟೀಲ, ಚನಬಸ್ಸು ಚನ್ನಿಗಾವಿ, ಸಂಗಮೇಶ ಹತ್ತಿ, ಚೇತನ್ ಸಂಗಮ,ಎಸ್ ಎಸ್ ಶಿವಣಗಿ,ಅಶೋಕ ರಾಠೋಡ,
ಸಂಗಮೇಶ ನಾಗೂರ,ಕಾಂತು ಮನ್ನೂರ,ಅನಿಲ ರಾಠೋಡ, ರೇಖಾ ಕೊಂಡಗೂಳಿ,ಪ್ರೀತಿ ಕಂಬಾರ,ಪಾರ್ವತಿ ಕಂಬಾರ,ಗೌರಮ್ಮ ಹುನಗುಂದ, ಸೇರಿದಂತೆ ಉಪಸ್ಥಿತರಿದ್ದರು.
ಇನ್ನಿತರರು ವೇದಿಕೆಯಲ್ಲಿದ್ದರು. ಮತಕ್ಷೇತ್ರದ ವಿವಿಧ ಬೂತಗಳ ಅಧ್ಯಕ್ಷರು. ಕಾರ್ಯದರ್ಶಿಗಳು, ಪ್ರಮುಖ ಕಾರ್ಯಕರ್ತರು ಸೇರಿದಂತೆ



















