ಇಂಡಿಯಲ್ಲಿ ತೋಳಗಳ ಹಾವಳಿಗೆ ಎರಡು ಕುರಿ ಬಲಿ..!
ಇಂಡಿ: ತಾಲ್ಲೂಕಿನ ತಡವಲಗಾ ಗ್ರಾಮದ ತೋಟದ ವಸತಿಯಲ್ಲಿ ಗುರುವಾರ ಮಧ್ಯಾಹ್ನ ಎರಡು ತೋಳಗಳು ಕುರಿಗಳ ದೊಡ್ಡಿಗೆ ಹೊಕ್ಕು ಎರಡು ಕುರಿಗಳನ್ನು ಕೊಂದು ಹಾಕಿವೆ.
ತಡವಲಗಾ ಗ್ರಾಮದ ಬಸವರಾಜ ಸಂಗಪ್ಪ ಜಾಡರ ಎಂಬುವರಿಗೆ ಸೇರಿದ ಕುರಿಗಳು ಎಂದು ತಿಳಿದು ಬಂದಿದೆ. ರೈತ ಬಸಪ್ಪ ಜಾಡರ ಹಾಗೂ ಪತ್ನಿ ಶಶಿಕಲಾ ಅವರು ಕುರಿಗಳನ್ನು ದೊಡ್ಡಿಯಲ್ಲಿ ಕಟ್ಟಿ ಬೇರೆಯವರ ತೋಟಕ್ಕೆ ಕೆಲಸಕ್ಕೆ ಹೋಗಿದ್ದಾರೆ. ಮನೆಯಲ್ಲಿ ಸುಮಾರು ಎಂಬತ್ತು ವರ್ಷ ವಯಸ್ಸಿನ ಅಜ್ಜಿಯನ್ನು ಬಿಟ್ಟು ಕೆಲಸಕ್ಕೆ ಹೋಗಿದ್ದಾರೆ.
ಮದ್ಯಾಹ್ನ ಒಂದೂವರೆ ಸುಮಾರಿಗೆ ಎರಡು ತೋಳಗಳು ದೊಡ್ಡಿಯಲ್ಲಿ ಕಟ್ಟಿದ ಎರಡು ಕುರಿಗಳನ್ನು ಕೊಂದು ಹಾಕಿವೆ.ಈ ಸದ್ದು ಕೇಳಿದ ಅಜ್ಜಿ ಹೊರಗಡೆ ಬರುತ್ತಿದ್ದಂತೆ ತೋಳಗಳು ಓಡಿ ಹೋಗಿವೆ.
ಅಜ್ಜಿ ಕಿರುಚುವುದನ್ನು ಕಂಡು ನೆರೆ ಹೊರೆಯ ಜನರು ಬರುವಷ್ಟರಲ್ಲಿ ಎರಡು ಕುರಿಗಳು ದೊಡ್ಡಿಯಲ್ಲಿ ಸತ್ತು ಹೋಗಿದ್ದು ಕಂಡು ಬಂದಿದೆ.
ಈ ಸುದ್ದಿ ತಿಳಿದು ಇಂಡಿ ಗ್ರಾಮೀಣ ಅರಣ್ಯ ಇಲಾಖೆಯ ತಡವಲಗಾ ಬಿಟ್ ಪ್ರವೀಣಕುಮಾರ ಹಚ್ಚಾಳಕರ್ ಹಾಗೂ ತಡವಲಗಾ ಗ್ರಾಮ ಆಡಳಿತ ಅಧಿಕಾರಿ ಮಾಹಾತೇಶ ಗುರುಭೆಟ್ಟಿ ಹಾಗೂ ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪಂಚನಾಮೆ ಮಾಡಿದ್ದಾರೆ.
ಇಂಡಿ: ಗ್ರಾಮೀಣ ಅರಣ್ಯ ಇಲಾಖೆಯ ತಡವಲಗಾ ಬಿಟ್ ಪ್ರವೀಣಕುಮಾರ ಹಚ್ಚಾಳಕರ್ ಹಾಗೂ ತಡವಲಗಾ ಗ್ರಾಮ ಆಡಳಿತ ಅಧಿಕಾರಿ ಮಾಹಾತೇಶ ಗುರುಭೆಟ್ಟಿ ತೋಳ ದಾಳಿ ಮಾಡಿದ ರೈತ ಮಹಿಳೆಯ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದರು.



















