ಮುದ್ದೇಬಿಹಾಳ:ಸರ್ಕಾರಿ ಆದರ್ಶ ವಿದ್ಯಾಲಯ ಬಿದರಕುಂದಿ ಶಾಲೆಯ ಮಕ್ಕಳು ಅಂತರಾಷ್ಟ್ರಮಷ್ಟಕ್ಕೆ ಆಯ್ಕೆಯಾಗಿದ್ದಾರೆ.
ಸರ್ಕಾರಿ ಆದರ್ಶ ವಿದ್ಯಾಲಯ ಬಿದರಕುಂದಿ ಶಾಲೆಯ ವಿದ್ಯಾರ್ಥಿಗಳು ಯೂತ್ ಗೇಮ್ಸ್ ಕೌನ್ಸಿಲಿಂಗ್ ಇಂಡಿಯಾ ವತಿಯಿಂದ ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ 14 ವರ್ಷದ ವಯೋಮಿತಿಯೊಳಗಿನ ಮಕ್ಕಳಾದ ಸಂಪತ. ಶಿಂಧೆ, ಆರ್ ಆರ್ಯ, ತನಿಷ್ ಪಾಟೀಲ್, ಸುಮಂಜಿತ್ ಪವಾರ. ಪ್ರೀತಮ್ ಬೆಳ್ಯಾಳ , ಮತ್ತು 17 ವರ್ಷದ ವಯೋಮಿತಿಯೊಳಗೆ ಮಲ್ಲಿಕಾರ್ಜುನ ಅಸ್ಕಿ ,ಕಾರ್ತಿಕ್ ತಿಮ್ಮಾಪುರ್, ಯವರು ಆಡಿ ಪ್ರಥಮ ಸ್ಥಾನ ಬಂದು ನೇಪಾಳದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಅನಿಲ್ ಕುಮಾರ್ ರಾಥೋಡ್ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಎ.ಸಿ.ಕೆರೂರ, ಎನ್ ಎಸ್ ಬಿರಾದಾರ ತಿಳಿಸಿದ್ದಾರೆ. ಈ ವೇಳೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು,ಶಾಲಾ ಸಿಬ್ಬಂದಿ ವರ್ಗ , ಹರ್ಷವನ್ನು ವ್ಯಕ್ತಪಡಿಸಿದ್ದಾರೆ.