ಕಲಿಕಾ ಹಬ್ಬದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿ ಸಾಧ್ಯ
ಇಂಡಿ: ಇಂದಿನ ವಿದ್ಯಾರ್ಥಿಗಳು ಓದಿಗಿಂತ ಮೊಬೈಲ ಬಳಕೆಗೆ ಒತ್ತು ನೀಡುತ್ತಿರುವದು ಬೇಸರದ ಸಂಗತಿಯಾಗಿದೆ ಎಂದು ಗ್ರಾ.ಪಂ ಅಧ್ಯಕ್ಷೆ ಸುನಂದಾ ವಾಲಿಕಾರ ಹೇಳಿದರು.
ತಾಲೂಕಿನ ತಡವಲಗಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸವೇಶ್ವರ ವಸತಿ ಶಾಲೆ ಆವರಣದಲ್ಲಿ ಆಯೋಜಿಸಿದ ೨೦೨೫-೨೬ ನೇ ಸಾಲಿನ ಕ್ಲಸ್ಟರ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯ ಕಲೆಗಳು, ಜನಪದ ಹಾಡುಗಳು, ಮತ್ತು ಕಥೆಗಳಿಗೆ ಈ ಹಬ್ಬದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದರು.
ಶಿಕ್ಷಕ ಟಿ.ಎಸ್.ಹಂಜಗಿ, ಬಸವೇಶ್ವರ ವಸತಿ ಶಾಲೆಯ ಮಿಖ್ಯ ಗುರುಮಾತೆ ಚೆನ್ನಮ್ಮ ಝಳಕಿ ಮಾತನಾಡಿ ಇದು ಮಕ್ಕಳಿಗೆ ತಮ್ಮ ಸಂಸ್ಕೃತಿಯ ಪರಿಚಯ, ಚಿತ್ರಕಲೆ, ಮಣ್ಣಿನ ಮಾದರಿ ತಯಾರಿಕೆ, ಕಾಗದದ ಕೆಲಸ, ನಾಟಕಗಳ ಮೂಲಕ ಸೃಜನಶೀಲ ಶಕ್ತಿಯನ್ನು ಉತ್ತೇಜಿಸಲಾಗುತ್ತಿದೆ ಎಂದರು.
ಶಿಕ್ಷಕರಾದ ಡಾ. ಕೆ.ಎಂ.ಇಂಡಿ ಎಸ್.ಡಿ.ಎಸ್.ಎಂ. ಅಧ್ಯಕ್ಷ ಬಸವರಾಜ ಪಂತೋಜಿ , ಎನ್.ಜಿ.ರೊಳ್ಳಿ, ಎಸ್.ಆರ್.ಗಿಡಗಂಟಿ, ಎಸ್.ಬಿ.ಅಂಗಡಿ ಮಾತನಾಡಿದರು.
ಸಿ.ಆರ್.ಪಿ ಗಳಾದ ಪ್ರಕಾಶ ಚವ್ಹಾಣ, ಮಂಜುನಾಥ ತೇಲಿ, ಎನ್.ಎಸ್.ಚವ್ಹಾಣ, ಎಚ್.ಆರ್.ಮುತ್ತಗಿ, ವಿ.ಆಯ್.ಜಾಡರ, ಎ.ಡಿ.ರೇವಶೆಟ್ಟಿ, ರಾಜು ತಳಕೇರಿ, ಎಸ್.ಎಂ.ವಂದಾಲ, ಲಕ್ಷಣ ಕೊಕನಿ, ಎಸ್.ಎಂ.ಲಾಳಸಂಗಿ, ಎಸ್.ಆರ್.ಝಳಕಿ, ಸಂಧೀಶ್ ಬಿರಾದಾರ, ಪ್ರೇಮಾ ಹುಬ್ಬಳ್ಳಿ, ಶ್ರೀದೇವಿ ಹಿಳ್ಳಿ, ರೇಣುಕಾ ಗುಣದಗಿ, ಕವಿತಾ ಪಾಟೀಲ ಮತ್ತಿತರಿದ್ದರು.
ಇಂಡಿ ತಾಲೂಕಿನ ತಡವಲಗಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸವೇಶ್ವರ ವಸತಿ ಶಾಲೆ ಆವರಣದಲ್ಲಿ ಆಯೋಜಿಸಿದ ಕ್ಲಸ್ಟರ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಸುನಂದಾ ವಾಲಿಕಾರ ಮಾತನಾಡಿದರು.