ಇಂಡಿ | ಸತತ 21 ವರ್ಷಗಳಿಂದ ಶಬರಿಮಲೆ ಯಾತ್ರೆ..!
ಇಂಡಿ: ತಾಲೂಕಿನ ಅಗರಖೇಡ ಗ್ರಾಮದ ಈರಣ್ಣ ಡಂಗಿ ಅವರು ಸತತ 21 ವರ್ಷಗಳಿಂದ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದು ಈ ವರ್ಷ 21ನೇ ವರ್ಷವೂ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ.
ಈರಣ್ಣ ಡಂಗಿ ಅವರು ಅಂಕವಿಕಲರಾದರು ಸಹ ಸ್ವಾಮಿ ಅಯ್ಯಪ್ಪನವರ ಮೇಲೆ ಅಪಾರ ಭಕ್ತಿ ಶ್ರದ್ಧೆ ಹೊಂದಿದ್ದಾರೆ. ಪ್ರತಿ ವರ್ಷವೂ ಅಯ್ಯಪ್ಪ ಮಾಲೆ ಧರಿಸಿ ಜಪ ತಪ ಮಾಡಿ ಅಗರಖೇಡ ಗ್ರಾಮದಿಂದ ಶಬರಿಮಲೆಗೆ ಯಾತ್ರೆ ಹೋಗುತ್ತಾರೆ.
ಇವರ ಯಾತ್ರೆಗೆ ಸಕಲ ಗ್ರಾಮಸ್ಥರು ಶುಭ ಕೋರಿದ್ದಾರೆ.


















