ಲಿಂಬೆ ಬೆಳೆಗಾರರ ಹಿತದೃಷ್ಟಿಯಿಂದ ಹೋರಾಟ ಅನಿವಾರ್ಯ : ಕೆಂಗನಾಳ
ವಿಜಯಪುರ : ಆತ್ಮೀಯ ಲಿಂಬೆ ಬೆಳೆಗಾರ ರೈತ ಭಾಂದವರೇ, ಬಹು ವಾರ್ಷಿಕ ಬೆಳೆ ಲಿಂಬೆ ಈ ಲಿಂಬೆಗೆ ಒಂದು ಡಾಗಗೆ (ಅಂದರೇ ಒಂದು ಸಾವಿರ ನಿಂಬೆಹಣ್ಣು) ಸದ್ಯ ಮಾರುಕಟ್ಟೆಯಲ್ಲಿ ಕೇವಲ ₹300 ಹಾಗೂ ₹400 ದರ ಇದೆ, ಇದು ಯಾವದಕ್ಕೂ ಸಾಲದು, ಯಾಕೆಂದರೆ ₹30 ರೂಪಾಯಿ ಚೀಲ ಒಂದು ಆಳಿಗೆ ಪಗಾರ #500 ಹಾಗಾದರೆ ನಮ್ಮ ರೈತರಿಗೆ ಲಾಗೋಡಿ ತಗೆದು ಲಾಭ ಶೂನ್ಯ, ಅದಕ್ಕಾಗಿ ನಾವು ಲಿಂಬೆ ಬೆಲೆಗಾರರ ಹಿತದೃಷ್ಟಿಯಿಂದ, ದೊಡ್ಡ ಮಟ್ಟದ ಹೋರಾಟ ಅನಿವಾರ್ಯವಾಗಿದೆ, ಅದಕ್ಕಾಗಿ ನಮ್ಮ ವಿಜಯಪುರ ಜಿಲ್ಲೆಯ ಎಲ್ಲ ರೈತರು ಇದೆ ದಿನಾಂಕ 13/01/2026 ರಂದು ಇಂಡಿ ನಗರದಲ್ಲಿ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಕೈ ಜೋಡಿಸಿ ಬೆಂಬಲಿಸಬೇಕು ಎಂದು ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷರು ಶಿವರಾಜ್ ಕೆಂಗನಾಳ ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ.


















