ಬಿಡಾಡಿ ದನಗಳ ಹಾವಳಿ ಬಿದಿಗೆ ಬಿದ್ದ ಕುಂಬಾರರ ಬದುಕು.
ಮುದ್ದೇಬಿಹಾಳ: ಪಟ್ಟಣದ ಕುಂಬಾರ ಗಲ್ಲಿಯಲ್ಲಿ ರವಿವಾರ ಬೆಳಗ್ಗೆ ಬಿಡಾಡಿ ದನಗಳ ಹಾವಳಿಯಿಂದ ಕುಂಬಾರರ ಬದುಕು ಬಿದಿಗೆ ಬಿಳುವಂತಾಗಿದೆ. ಮಣ್ಣಿನಿಂದ ಜನಸಾಮಾನ್ಯರು ಬಳಸುವ ಮಣ್ಣಿನ ಸಾಮಗ್ರಿಗಳನ್ನು ತಯಾರಿಸಿ ಮನೆಗಳ ಮುಂದೆ ಒಣಗಲು ಇಟ್ಟಿದ್ದ ಮಡಿಕೆ, ಕುಂಭ, ಒಲಿಗಳು ಸೇರಿದಂತೆ ಮಣ್ಣಿನಿಂದ ತಯಾರಿಸಿದ ಸಾಮಗ್ರಿಗಳನ್ನು ದನಗಳು ತುಳಿದು ಹಾಳುಮಾಡಿವೆ.
ಘಟನೆಯಲ್ಲಿ ರಾಮಣ್ಣ ಕುಂಬಾರರವರಿಗೆ ಸೇರಿದ ಒಲೆಗಳು ಸಂಪೂರ್ಣವಾಗಿ ನಾಶವಾಗಿವೆ. ದಿನಗಟ್ಟಲೆ ಶ್ರಮಪಟ್ಟು ತಯಾರಿಸಿದ ಸಾಮಗ್ರಿಗಳು ಕ್ಷಣಾರ್ಧದಲ್ಲಿ ಹಾಳಾದುದರಿಂದ ಕುಟುಂಬಕ್ಕೆ ಆರ್ಥಿಕ ನಷ್ಟ ಉಂಟಾಗಿದೆ. ಈಗಾಗಲೇ ಮಾರುಕಟ್ಟೆ ಸಮಸ್ಯೆ ಮತ್ತು ದುಡಿಮೆಯ ಕೊರತೆಯಿಂದ ಸಂಕಷ್ಟದಲ್ಲಿರುವ ಕುಂಬಾರರಿಗೆ ಈ ಘಟನೆ ಮತ್ತೊಂದು ಹೊಡೆತವಾಗಿದೆ.
ಬಿಡಾಡಿ ದನಗಳ ನಿಯಂತ್ರಣಕ್ಕೆ ಹಲವು ಬಾರಿ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಕುಂಭಾರ ಸಮುದಾಯ ಆರೋಪಿಸಿದೆ. ದನಗಳನ್ನು ಹಿಡಿದು ಗೋಷಾಲೆಗೆ ಕಳುಹಿಸುವುದು ಹಾಗೂ ಪಟ್ಟಣದಲ್ಲಿ ನಿಯಂತ್ರಣ ವಹಿಸುವಂತೆ ಅವರು ಒತ್ತಾಯಿಸಿದ್ದಾರೆ.
ಬಿಡಾಡಿ ದನಗಳ ಹಾವಳಿಯಿಂದ ಕುಂಭಾರಿಕೆ ವೃತ್ತಿ ಅಪಾಯಕ್ಕೆ ಸಿಲುಕಿದ್ದು, ಪುರಸಭೆ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೋಟ್ :- ಪಟ್ಟಣದಲ್ಲಿನ ಕುಂಬಾರ ಸಮುದಾಯ ತಮ್ಮ ಮನೆಯ ಮುಂದೆ ಮಣ್ಣಿನಿಂದ ಮಾಡಿದ ಸಾಮಗ್ರಿಗಳನ್ನು ಒಣಗಲು ಹಾಕಿದ್ದ ಸಂಧರ್ಭದಲ್ಲಿ ಬಿಡಾಡಿ ದನಗಳ ಹಾವಳಿಯಿಂದ ಹಾಳಾಗಿದ್ದು, ಅನೇಕ ಬಾರಿ ಪುರಸಭೆಗೆ ತಿಳಿಸದರು ಕ್ರಮ ಕೈಗೋಳ್ಳುತ್ತಿಲ್ಲಾ.
ಕೃಷ್ಣ ಕುಂಬಾರ.
ಕುಂಬಾರ ಗಲ್ಲಿ ನಿವಾಸಿ.


















