ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ , ಉಪಾಧ್ಯಕ್ಷ ಅವಿರೋಧ ಆಯ್ಕೆ.
ಮುದ್ದೇಬಿಹಾಳ: ತಾಲೂಕಿನ ಘಾಳಪೂಜಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಿಗೆ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಹಿಂದೆ ಸಂಘದ ಅಧ್ಯಕ್ಷರಾಗಿದ್ದ ಡಿ.ಬಿ. ನಾಡಗೌಡ್ರ ಹಾಗೂ ಉಪಾಧ್ಯಕ್ಷೆಯಾಗಿದ್ದ ನೀಲಮ್ಮ ಪರಸಪ್ಪ ಲೋಟಗೇರಿ ಅವರ ರಾಜೀನಾಮೆಯಿಂದ ತೆರವಾದ ಹುದ್ದೆಗಳಿಗೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಲೋಟಗೇರಿ ಗ್ರಾಮದ ರಾಮಣ್ಣ ಯಮನಪ್ಪ ಹಟ್ಟಿ (ಬಿರಾದಾರ) ಅವರನ್ನು ಅಧ್ಯಕ್ಷರಾಗಿ ಹಾಗೂ ಇಂಗಳಗಿ ಗ್ರಾಮದ ಅಮರೇಶ ಕರಡಿ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚುನಾವಣಾ ಪ್ರಕ್ರಿಯೆ ವೇಳೆಯಲ್ಲಿ ಯಮನಪ್ಪ ಕಮರಿ, ದೇವಮ್ಮ ಚನ್ನಪ್ಪ ಜೂಲಗುಡ್ಡ, ಐ.ಜಿ. ನಾಡಗೌಡ್ರ, ಬಿ.ಎಸ್. ಕಣಕಾಲಮಠ, ಶಿವಶರಣ ಹಾದಿಮನಿ, ರಮೇಶ ವಾಲಿಕಾರ ಹಾಗೂ ಸಂಘದ ಮಾಜಿ ಅಧ್ಯಕ್ಷ ಡಿ.ಬಿ. ನಾಡಗೌಡ್ರ ಉಪಸ್ಥಿತರಿದ್ದರು.
ಸಂಘದ ಸಿಬ್ಬಂದಿಗಳಾದ ಪ್ರಭಾರ ಕಾರ್ಯದರ್ಶಿ ರಾವಜಪ್ಪ ಮಾದರ, ರಘುನಾಥ ಸಾಸನೂರ ಹಾಗೂ ಸಾಯಬಣ್ಣ ಚಲವಾದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಗ್ರಾಮದ ಪ್ರಮುಖರಾದ ಬಸಣ್ಣ ಹುಗ್ಗಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಲಪ್ಪ ಜೂಲಗುಡ್ಡ, ಯಲ್ಲಪ್ಪ ನಾಗರಬೆಟ್ಟ, ಚನಬಸಪ್ಪ ಹಾದಿಮನಿ, ತಾಲ್ಲೂಕು ಪಂಚಾಯತ್ ಸದಸ್ಯರಾದ ಸುರೇಶ ಹುಗ್ಗಿ ಹಾಗೂ ರೇವಣಸಿದ್ದಪ್ಪ ದಳಪತಿ, ಗ್ರಾಮ ಪಂಚಾಯತ್ ಸದಸ್ಯೆ ನೀಲಮ್ಮ ನಾಗರಬೆಟ್ಟ, ಬಿ.ಕೆ. ಮಂಗಳೂರು, ಶಿವಪುತ್ರ ಬಂಗಾಳಿ, ನಾಗೇಶ ಬಾಚಿಹಾಳ, ಬಸವರಾಜ ಹಟ್ಟಿ, ಗಂಗಾಧರ ಜೂಲಗುಡ್ಡ, ಹುಲಗಪ್ಪ ನಾಗರಬೆಟ್ಟ, ಮುತ್ತಣ್ಣ ನಾಗಬೇನಾಳ ಸೇರಿದಂತೆ ಉಪಸ್ಥಿತರಿದ್ದರು.


















