ಸಾವಿತ್ರಿಬಾಯಿ ಫುಲೆ ಜಯಂತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಯಶಸ್ವಿಗೊಳಿಸಿ : ಅಂಜನಾ ಶಿರವಾಳ
ಕಮಲಾಪುರ : ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಫೆಡರೇಶನ್ ನವ ದೆಹಲಿ, ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಶಿಕ್ಷಕಿಯರ ಸಂಘ ಬೆಂಗಳೂರು ಹಾಗೂ ಪೂಜ್ಯ ಡಾ.ಶರಣಬಸಪ್ಪ ಅಪ್ಪಾ ಫ್ಯಾಮಿಲಿ ಟ್ರಸ್ಟ್ ದಾಸೋಹ ಮನೆ ಶರಣಬಸವೇಶ್ವರ ಸಂಸ್ಥಾನ ಇವರ ಸಂಯುಕ್ತಾಶ್ರಯದಲ್ಲಿ ನಗರದ ಬಡಾ.ಶರಣಬಸವೇಶ್ವರ ಪಬ್ಲಿಕ್ ಶಾಲೆಯಲ್ಲಿ
ಹಮ್ಮಿಕೊಂಡ ಸಾವಿತ್ರಿ ಬಾಯಿ ಪುಲೆ ಜಯಂತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಯಶಸ್ವಿಗೊಳಿಸಬೇಕೆಂದು ಕಮಲಾಪುರ ತಾಲೂಕು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕು ಅಧ್ಯಕ್ಷೆ ಅಂಜನಾ ಶಿರವಾಳ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕಮಲಾಪುರ ತಾಲೂಕಿನಿಂದ ಗಂಗಮ್ಮ ಪಾಟೀಲ್, ಅಂಗದರಾವ ಪಾಟೀಲ್, ಪೂಜಾ ಸ್ಥಾವರಮಠ, ಅನಿತಾ ಅರಕೇರಿ, ಭೀಮಸಿಂಗ್ ರಾಠೋಡ, ಶರಣಬಸಪ್ಪ, ಲಕ್ಷ್ಮೀಕಾಂತ ಮೇತ್ರಿ 2025 ನೇ ಸಾಲಿನ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ತಾಲೂಕಿನ ವ್ಯಾಪ್ತಿಯ ಎಲ್ಲಾ ಶಿಕ್ಷಕರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.


















