ಇಂಡಿ ನಗರದಲ್ಲಿ ವ್ಯಾಪಾರಿಗಳ ರಚಿಸಿದ ಸಂಘದ ಉದ್ಘಾಟನೆ
ಇಂಡಿ: ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುವ ಬಡ ಕುಟುಂಬಗಳು ತಮ್ಮ ಉಪ ಜೀವನಕ್ಕೆ ಬೇಕಾದ ತಳ್ಳುಗಾಡಿ ಮತ್ತು ಆಸರೆಗೆ ಕೊಡೆ ಬೇಡಿಕೆ ಇಟ್ಟಿದ್ದು ಶೀಘ್ರದಲ್ಲಿಯೇ ಅವುಗಳನ್ನು ನೀಡುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಬುಧವಾರ ಸಾಯಂಕಾಲ ನಗರದ ಲಚ್ಯಾಣ ರಸ್ತೆಯಲ್ಲಿ ನಡೆದ ಬೀದಿ ವ್ಯಾಪಾರಿಗಳ ರಚಿಸಿದ ಸಂಘದ ಉದ್ಘಾಟನೆ ಮಾಡಿ ಮಾತನಾಡಿದರು.
ಬದುಕಿಗಾಗಿ ಕುಟುಂಬ ನಿರ್ವಹಣೆಗಾಗಿ ಬಿಸಿಲು ಮನೆ ಚಳಿ ಎನ್ನದೇ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಬಡ ವ್ಯಾಪಾರಿಗಳಿಗೆ ನಾನು ಆಸರೆಯಾಗಿರುತ್ತೇನೆ ಎಂದು ಭರವಸೆ ನೀಡಿದರು.
ಶಾಕೀರ ಮೌಲಾನಾ ಮಾತನಾಡಿ ಬೀದಿ ವ್ಯಾಪಾರಿಗಳು ಬಡವರು. ಅವರು ದುಡಿದರೆ ಮಾತ್ರ ಜೀವನ ಸಾಗುತ್ತದೆ. ಅದಕ್ಕಾಗಿ ಸಂಘವು ಸಂಘಟನೆ ಮಾಡಿ ಅವರ ಸಮಸ್ಯೆಗೆ ಪರಿಹಾರ ನೀಡುವ ಮತ್ತು ಸಹಾಯ ಮಾಡುವ ಮನೋಭಾವ ಹೊಂದಬೇಕು ಎಂದರು.
ಜಿಯಾ ಉಲ್ ಹಕ ಮೌಲಾನಾ, ಸತ್ತಾರ ಬಾಗವಾನ, ಯಾಕುಬ ನಾಟಿಕಾರ, ಮಾತನಾಡಿದರು.
ಸಂಘದ ಇಂಡಿ ಅಧ್ಯಕ್ಷ ರಿಯಾಜ ಬಾಗವಾನ, ರಮಜಾನ ಶೇಖ, ಫಯಾಜ ಬಾಗವಾನ, ನಿಸಾರ ಬಾಗವಾನ, ಪ್ರಶಾಂತ ಕಾಳೆ, ಜಟ್ಟೆಪ್ಪ ರವಳಿ, ಮುತಾಲಿಕ ಬಾಗವಾನ, ಉಪಾಧ್ಯಕ್ಷ ಅಮೀರ ಪಠಾಣ, ಜಾವೇದ ಮೋಮಿನ, ಆತೀಕ ಮೋಮಿನ, ಅಯೂಬ ಬಾಗವಾನ, ಶಬ್ಬೀತ ಖಾಜಿ ಮತ್ತಿತರರಿದ್ದರು.
ಇಂಡಿ: ನಗರದ ಲಚ್ಯಾಣ ರಸ್ತೆಯಲ್ಲಿ ನಡೆದ ಬೀದಿ ವ್ಯಾಪಾರಿಗಳ ರಚಿಸಿದ ಸಂಘದ ಉದ್ಘಾಟನೆ ಮಾಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು.



















