ಮಹಿಳೆಯರ ನೆಟ್ ಬಾಲ್ ಕ್ರೀಡಾಕೂಟ ಉದ್ಘಾಟಿನೆ
ವಿಜಯಪುರ: ಯುವಜನತೆಯನ್ನು ದುಶ್ಚಟಗಳಿಂದ ದೂರವಿದ್ದು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಕ್ರೀಡೆಗಳು ಸಹಾಯ ಮಾಡುತ್ತವೆ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಸಿಸ್ಟಂಟ ರಜಿಸ್ಟ್ರಾರ ಡಾ. ತನ್ವೀರ ಅಹ್ಮದ ನಾಯಕೋಡಿ ಹೇಳಿದ್ದಾರೆ.
ತಿಕೋಟಾದಲ್ಲಿ ಶನಿವಾರ ಬಿ.ಎಲ್.ಡಿ.ಇ ಸಂಸ್ಥೆಯ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ನೆಟ್ ಬಾಲ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿದ್ದಾಗ ಮಾತ್ರ ಸಾಮಾಜಿಕವಾಗಿ, ಆರ್ಥಿಕವಾಗಿ ಯಶಸ್ಸು ಸಾಧಿಸಬಹುದು. ಹೀಗಾಗಿ ಎಲ್ಲರೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಬಿ.ಎಲ್.ಡಿ.ಇ ಸಂಸ್ಥೆಯ ದೈಹಿಕ ನಿರ್ದೇಶಕ ಎಸ್. ಎಸ್. ಕೋರಿ ಮಾತನಾಡಿ, ವಿಧ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡೆಗಳಲ್ಲಿಯೂ ಪಾಲ್ಗೊಳ್ಳಬೇಕು. ಕ್ರೀಡೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ತಮ್ಮ ಪಾಲಕರು, ಕಲಿತ ಶಾಲೆ, ಕಾಲೇಜು, ಊರು, ಜಿಲ್ಲೆ ಮತ್ತು ರಾಜ್ಯದ ಹೆಸರಿಗೆ ಕೀರ್ತಿ ತರಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಪ್ರಕಾಶ ಸಿದ್ದಾಪುರ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ. 15ಕ್ಕೂ ಹೆಚ್ಚು ಜಿಲ್ಲೆಗಳಿಂದ ಕ್ರೀಡಾಪಟುಗಳು ಆಗಮಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕ್ರೀಡಾ ಉಪನಿರ್ದೇಶಕ ಕೈಲಾಸ ಹಿರೇಮಠ, ವಿವಿ ಸೆನೇಟ್ ಸದಸ್ಯ ಡಾ. ಸಂತೋಷ ಇಂಡಿ, ರವಿ ದೇಸಾಯಿ, ಡಾ. ಎಂ. ಬಿ. ತಡಲಗಿ, ನವನಾತ ಅಜೂರ, ಈರಣ್ಣಾ ನಿಪ್ಪಾಣಿ, ಪ್ರಶಾಂತ, ಈಶ್ವರ ಆಕಾಶ, ಈಶ್ವರ, ಆಕಾಶ, ಜಾಧವ, ಸಿದ್ದಮ್ಮ ನಾವದಗಿ, ಬಸಲಿಂಗಮ್ಮ ಹಯ್ಯಾಳ, ಮಲ್ಲಪ್ಪ ಕುರಪಿ, ಗೀತಾ ಕೊಣ್ಣೂರ, ಕೀರ್ತಿ ಹಳೆಮನಿ, ರಾಣುಬಾಯಿ ಸೂರ್ಯವಂಶಿ, ಶೋಭಾ ಜುಮನಾಳ, ಸಿದ್ದನಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಕವಿತಾ ಸದಾಗೋಳ, ಆನಂದ ಹೊಸಟ್ಟಿ, ಬಸವರಾಜ ಕಿತ್ತೂರ, ಭೀಮರಾವ ಮಲಕನವರ ಮುಂತಾದವರು ಉಪಸ್ಥಿತರಿದ್ದರು.



















