ಇಂಡಿಯಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರತೀಟನ್ ಕಬ್ಬಿಗೆ ₹4 ಸಾವಿರ ರೂಪಾಯಿ ನೀಡಲು ಆಗ್ರಹಿಸಿ ಅನಿರ್ಧಿಷ್ಠ ಮುಷ್ಕರ
ಇಂಡಿ: ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಪ್ರತೀಟನ್ ಕಬ್ಬಿಗೆ ನಾಲ್ಕು ಸಾವಿರ ರೂಪಾಯಿ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ನೇತೃತ್ವದಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರೈತರು ಸೋಮವಾರ ಅನಿರ್ಧಿಷ್ಠ ಮುಷ್ಕರ ಪ್ರಾರಂಭಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಅಧ್ಯಕ್ಷ ಎಸ್.ಬಿ.ಕೆಂಬೋಗಿ ಮಾತನಾಡಿ ಈಗಾಗಲೇ ಕೇಂದ್ರ ಸರಕಾರ ಕಬ್ಬಿಗೆ ಎಫ್ಆರ್ಪಿ ೩೫೫೦ ಬೆಂಬಲ ಬೆಲೆ ಘೋಷಿಸಿದೆ. ಆದರೆ ಕಾರ್ಖಾನೆ ಮಾಲೀಕರು ಅದನ್ನು ಪಾಲನೆ ಮಾಡಿ ಬೆಲೆ ಘೋಷಿಸುತ್ತಿಲ್ಲ. ರಾಜ್ಯ ಸರಕಾರ ಈ ಕೂಡಲೆ ಮಧ್ಯಸ್ಥಿಕೆವಹಿಸಿ ಹೆಚ್ಚಿನ ದರ ನೀಡುವಂತೆ ಕಾರ್ಖಾನೆಯವರಿಗೆ ತಿಳಿಸಬೇಕು. ಜಿಲ್ಲಾಧಿಕಾರಿಗಳು ಕಾರ್ಖಾನೆ ಮಾಲೀಕರ ಸಭೆ ಕರೆದು ತಿಳಿಸಿದ್ದಾರೆ. ಅದಲ್ಲದೆ ಜಿಲ್ಲಾಧಿಕಾರಿಗಳು ರೈತರ ನೇತೃತ್ವದಲ್ಲಿ ಎರಡು ಸಭೆ ನಡೆದು ಬೆಲೆ ಕುರಿತು ತಿಳಿಸಿದರೂ ಯಾವದೇ ಕ್ರಮ ಕೈಕೊಂಡಿಲ್ಲ. ಹೀಗಾಗಿ ಅನಿರ್ಧಿಷ್ಠ ಮುಷ್ಕರ ಅನಿವಾರ್ಯವಾಗಿದೆ. ಸಂಸದರು ನಮ್ಮ ಮುಷ್ಕರಕ್ಕೆ ಭೇಟಿ ನೀಡಿದ್ದು, ಈ ಕುರಿತು ಕೇಂದ್ರ ಸರ್ಕಾರದಿಂದಲಾದರೂ ಬೆಂಬಲ ಬೆಲೆ ನೀಡುವಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮುಷ್ಕರ ಸ್ಥಳಕ್ಕೆ ಸಂಸದ ರಮೇಶ ಜಿಗಜಿಣಗಿ ಭೇಟಿ ನೀಡಿ ಮಾತನಾಡಿ, ಕಬ್ಬಿಗೆ ಬೆಲೆ ನಿಗದಿ ಮಾಡುವವುದು ರಾಜ್ಯ ಸರಕಾರಕ್ಕೆ ಸಂಬAದಿಸಿದೆ. ಮತ್ತು ಕೇಂದ್ರ ಸರಕಾರ ಎಫ್ಆರ್ಪಿ ಬೆಲೆ ಘೋಷಿಸಿದೆ. ಆದರೂ ಕೇಂದ್ರ ಸರಕಾರದಿಂದ ಏನೇ ಬೆಂಬಲ ಕೋರಿದರೂ ನಾನು ಕೇಂದ್ರದಲ್ಲಿ ಧ್ವನಿ ಎತ್ತಲು ಸಿದ್ದ ಎಂದರು.
ಜಿಲ್ಲೆಯ ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳದ್ದೇ ಆಗಿರುವುದರಿಂದ ತಮ್ಮ ರಾಜಕೀಯ ಇಛ್ಛಾಶಕ್ತಿ ಪ್ರದರ್ಶಿಸಿ, ರೈತರ ಸಹಾಯಕ್ಕೆ ಬರಲು ರಾಜಕಾರಣಿಗಳು ಮುಂದಾಗಬೇಕು. ಕಬ್ಬಿಗೆ ಉತ್ತಮ ದರ ನೀಡುವವರೆಗೂ ನಮ್ಮ ಮುಷ್ಕರ ನಿರಂತರವಾಗಿ ನಡೆಯಲಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳು, ಸಂಬAಧಿಸಿದ ಸಚಿವರು ಗಂಭೀರವಾಗಿ ಪರಿಗಣಿಸಿ, ರೈತರಿಗೆ ಹೆಚ್ಚಿನ ದರ ನೀಡಬೇಕು.
ಎಸ್.ಬಿ. ಕೆಂಬೋಗಿ, ರೈತ ಸಂಘಟನೆ ಜಿಲ್ಲಾಧ್ಯಕ್ಷ.
ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ, ಶ್ರೀಶೈಲಗೌಡ ಬಿರಾದಾರ, ಬಿಜೆಪಿಂ ಮುಖಂಡರುಗಳಾದ ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಬಿಎಸ್.ಪಾಟೀಲ, ಮಲ್ಲಿಕಾರ್ಜುನ ಕಿವುಡೆ, ಚಂದ್ರಶೇಖರ ಕವಟಗಿ ಮಾತನಾಡಿದರು.
ರೈತ ಸಂಘದ ಅದೃಷ್ಯಪ್ಪ ವಾಲಿ, ರಾಮಸಿಂಗ ಕನ್ನೊಳ್ಳಿ, ರವಿ ಗವಳಿ, ತಮ್ಮಾರಾಯ ಆಸಂಗಿ, ಸಿದ್ದರಾಮ ತಳವಾರ, ರಮೇಶ ಕುಂಬಾರ, ಎಂ.ಬಿ. ನಾವದಗಿ, ಕೆ.ಆರ್.ಪೂಜಾರಿ, ಮಲ್ಲಿಕಾರ್ಜುನ ಹೋರ್ತಿ, ಚಿದು ಮಾಶ್ಯಾಳ, ಧರ್ಮು ಅವಟಿ, ಸೂರಪ್ಪ ಗೋಟ್ಯಾಳ, ರಾಮಚಂದ್ರ ಖೈರೋಟ, ಜಬ್ಬಾರ ಗೊಗಿನಾಳ, ಹಣಮು ರಜಪೂತ, ಸಿದ್ದಪ್ಪ ಪೂಜಾರಿ, ಪರಸಪ್ಪ ಮಸಳಿ, ಸಿದ್ದು ಮಾಶ್ಯಾಳ. ಮಾಳಪ್ಪ ಹಂಜಗಿ, ಗಿರಮಲ್ಲ ಮಸಳಿ, ಆಕಾಶ ಪೂಜಾರಿ ಸೇರಿದಂತೆ ನೂರಾರು ರೈತರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
ಇಂಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಬ್ಬಿಗೆ ರೂ ನಾಲ್ಕು ಸಾವಿರ ದರ ನೀಡುವಂತೆ ಆಗ್ರಹಿಸಿ ರೈತರು ನಡೆಸುತ್ತಿದ್ದ ಅನಿದೀಷ್ಠ ಮುಷ್ಕರದಲ್ಲಿ ಭಾಗಿಯಾಗಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು.


















