ಕ್ಷತೀಯ ಸಮಾಜದವರು ಶೈಕ್ಷಣಿಕವಾಗಿ ಮುಂದುವರೆಯಬೇಕು ಇದರಿಂದ ಎಲ್ಲ ರಂಗಗಳಲ್ಲಿಯೂ ಮುಂದುವರೆಯಲು ಸಾಧ್ಯವಿದೆ
ಮುದ್ದೇಬಿಹಾಳ : ಭಾರತ ಇತಿಹಾಸದಲ್ಲಿಯೇ ಕ್ಷತೀಯರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಕ್ಷತ್ರಿಯ ಸಮಾಜದ ಅನೇಕ ರಾಜರುಗಳು ಈ ದೇಶವನ್ನು ಆಳ್ವಿಕೆ ಮಾಡಿದ್ದಾರೆ ಅಂದಿನ ರಾಜರು ಕೇವಲ ರಾಜಭಾರಕ್ಕಾಗಿ ಹೋರಾಡದೇ ಎಲ್ಲ ಜನರನ್ನು ರಕ್ಷಿಸುವದರೊಂದಿಗೆ ನಮ್ಮ ದೇಶದ ಪರಂಪರೆಯನ್ನು ಉಳಿಸುವಲ್ಲಿ ಅವರು ವಹಿಸಿದ ಪ್ರಮುಖ ಪಾತ್ರ ಇಂದಿನವರೆಗೂ ಅವರ ಹೆಸರುಗಳು ಚೀರಸ್ಮರಣಿಯವಾಗಿ ಉಳಿಯಲು ಕಾರಣವಾಗಿದೆ ಕರ್ನಾಟಕ ಕ್ಷತ್ರೀಯ ಒಕ್ಕೂಟದ ತಾಲೂಕಾಧ್ಯಕ್ಷ ಯಶವಂತ ಕಲಾಲ,ಜಂಟಿಯಾಗಿ ಚಂದ್ರು ಕಲಾಲ್ ಅವರು ಹೇಳಿದರು.
ಇತ್ತೀಚೆಗೆ ಕತೀಯ ಸಮಾಜದ ವೇದಿಕೆಯಲ್ಲಿ ನಡೆದ 2025-27 ನೇ ಅವಧಿಗೆ ತಾಲೂಕು ಸೂರ್ಯವಂಶ ಕ್ಷತ್ರೀಯ ಕಲಾಲ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದ ಕ್ಷತ್ರೀಯ ಸಮಾಜದವರು ಎಲ್ಲ ಸಮಾಜಬಾಂದವರೊಂದಿಗೆ ಉತ್ತಮ ಬಾಂದವ್ಯ ಮತ್ತು ಸಂಬಂದಗಳನ್ನು ಹೊಂದುವುದರ ಮೂಲಕ ಸಮಾಜವನ್ನು ರಕ್ಷಿಸುವ ಕೆಲಸವನ್ನು ಸಹ ಮಾಡಿದ್ದಾರೆ ಅಂತಹ ವಂಶದಲ್ಲಿ ಜನ್ಮತಾಳಿದ ನಾವುಗಳು ಅವುಗಳನ್ನು ಉಳಿಸಿ ಬೆಳೆಸುವಂತಹ ಕಾರ್ಯ ಮಾಡಬೇಕೆಂದ ಅವರು ಇಡೀ ನಮ್ಮ ಭಾರತ ದೇಶದ ಇತಿಹಾಸದಲ್ಲಿಯೇ ಕ್ಷತ್ರಿಯರು ಗೌರವ ಮತ್ತು ಅಧಿಕಾರದ ಸ್ಥಾನವನ್ನು ಹೊಂದಿದ್ದಾರೆ ಅಂತಹ ಧರ್ಮದಲ್ಲಿ ಹುಟ್ಟಿದಂತಹ ನಾವುಗಳು ಸಮಾಜದ ಅಭಿವೃದ್ಧಿಗಾಗಿ ಹಾಗೂ ಇತರ ಸಮಾಜಗಳೊಂದಿಗೆ ಉತ್ತಮವಾದಂತಹ ಸಂಬಂದಗಳನ್ನು ಹೊಂದುವ ಮೂಲಕ ನಮ್ಮ ಸಮಾಜದ ಘನತೆ ಗೌರವಗಳನ್ನು ಉಳಿಸಿಕೊಳ್ಳುವಂತಹ ಕಾರ್ಯಗಳನ್ನು ನಾವೆಲ್ಲರೂ ಮಾಡೋಣವೆಂದು ಹೇಳಿದರು.
ಇನ್ನೋರ್ವ ತಾಲೂಕು ಸೂರ್ಯವಂಶ ಕ್ಷತ್ರೀಯ ಕಲಾಲ ಸಮಾಜದ ನೂತನ ಅಧ್ಯಕ್ಷ ಸುರೇಶ ಕಲಾಲ(ಚಂದುಕರ) ಅವರು ಮಾತನಾಡಿ ಕ್ಷತೀಯ ಸಮಾಜದವರು ಶೈಕ್ಷಣಿಕವಾಗಿ ಮುಂದುವರೆಯಬೇಕು ಇದರಿಂದ ಎಲ್ಲ ರಂಗಗಳಲ್ಲಿಯೂ ಮುಂದುವರೆಯಲು ಸಾಧ್ಯವಿದೆ ಮಕ್ಕಳಿಗೆ ಸ್ವಂತ ಉದ್ಯೋಗದ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು ಎಂದು ಹೇಳಿದರಲ್ಲದೇ ಎಲ್ಲರ ಸಹಕಾರದಿಂದ ಈ ಸಮಾಜದ ಅಭಿವೃದ್ಧಿಗೆ ಶ್ರಮಿಸುವಂತಹ ಕೆಲಸವನ್ನು ಮಾಡುವದರ ಜೊತೆಗೆ ಎಲ್ಲರೊಂದಿಗೂ ಪ್ರೀತಿ,ವಿಶ್ವಾಸದಿಂದ ಇದ್ದು ನಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಸಮಾಜದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅದ್ಯಕ್ಷರನ್ನಾಗಿ ಸುರೇಶ ಕಲಾಲ(ಚಂದುಕರ), ಉಪಾದ್ಯಕ್ಷರನ್ನಾಗಿ ಗೋಪಾಲ ಕಲಾಲ(ಟಿಂಗರಿಕರ), ಪ್ರ ಕಾರ್ಯದರ್ಶಿಯನ್ನಾಗಿ ಪರಶುರಾಮ ಕಲಾಲ(ಚಂದುಕರ), ಖಜಾಂಚಿಯನ್ನಾಗಿ ಸಂಜು ಸತಾರಕರ, ಹಾಗೂ ಸದಸ್ಯರನ್ನಾಗಿ ಬಸವರಾಜ ಟಿಂಗರಿಕರ, ಮಂಜುನಾಥ ಕಾಂಬಳೆಕರ, ಸಚೀನ ತೊರಲೆಕರು, ಗಂಗಾಧರ ಟಿಂಗರಿಕರ, ಶ್ರೀನಿವಾಸ ಟಿಂಗರಿಕರ, ಅರುಣ ನಗರಕರ, ಚಂದ್ರು ಕಲಾಲ, ಮಾರುತಿ ಪ್ರಭುಕರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಮಯದಲ್ಲಿ ನೂತನವಾಗಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.