ಇಂಡಿ: ಪಟ್ಟಣದ ಓಂ ಶಾಂತಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಜಗದಂಬಾ ಸರಸ್ವತಿ (ಮಮ್ಮ) ಆದಿ ಬ್ರಹ್ಮಾ ಕುಮಾರಿ ಯವರ ಸ್ಮೃತಿ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಯಮುನಾ ಅಕ್ಕನವರು ಶ್ರೀದೇವಿ ಅಕ್ಕನವರು ಬಂದ ಎಲ್ಲ ದೈವಿ ಪರಿವಾರಕ್ಕೆ ಬ್ರಹ್ಮಾ ಭೋಜನ ನೀಡಿದರು.
ಈ ಕಾರ್ಯಕ್ರಮಕ್ಕೆ ಹಿರಿಯರಾದ ಶಿವಲಿಂಗಪ್ಪ ಪಟ್ಟದಕಲ್, ವಿಜು ಪತಂಗೆ, ಸಂಜೀವ್ ಕುಲಕರಣಿ, ಲಲಿತಾ ಹೂಗಾರ, ರಾಮಚಂದ್ರ ಹೂಗಾರ, ಜಗದೇವಿ ಪಾಟೀಲ, ಉಮಾ ಪಟ್ಟದಕಲ್, ವಿದ್ಯಾಶ್ರೀ ಪಾಟೀಲ, ರಾಜಶ್ರೀ ಕೋಳೇಕರ್ ಮತ್ತು ಎಲ್ಲ ಹಿರಿಯ ಮಾತೆಯರು ಪಾಲ್ಗೊಂಡಿದ್ದರು.