ಶಿಕ್ಷಕರ ಸಹಕಾರಿ ಪತ್ತಿನ ಸಂಘಕ್ಕೆ ಗುರು ಸ್ಪಂದನ ಹಳೆಯ ಪೆನಲ್ ನಾಮ ಪತ್ರ ಸಲ್ಲಿಕೆ..! ಯಾರು ಯಾರು ಗೊತ್ತಾ..?
ಇಂಡಿ : ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸಂಘದ 2025 30ನೇ ಸಾಲಿನ ಆಡಳಿತ ಮಂಡಳಿಯ ಚುನಾವಣಾ ಗುರು ಸ್ಪಂದನ ಹಳೆಯ ಪೆನಲ್ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಜರುಗಿತು.
ಗುರು ಸ್ಪಂದನ ಹಳೆ ಪೆನಲ್ ನ ಮುಖಂಡರು ಜಿ ಓ ಸಿ ಸಿ ನಿರ್ದೇಶಕರಾದ ಶ್ರೀ ಅಲ್ಲಾಭಕ್ಷ ವಾಲಿಕಾರ, ಇಂಡಿ ತಾಲೂಕ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ವೈ ಟಿ ಪಾಟೀಲ್, ಕಾರ್ಯದರ್ಶಿಗಳಾದ ಶ್ರೀ ಅಲ್ತಾಫ್ ಬೋರಾಮಣಿ ಬೆಳಗಾವಿ ಬೆಳಗಾವಿ ವಿಭಾಗೀಯ ಉಪಾಧ್ಯಕ್ಷರಾದ ಶ್ರೀ ಎಸ್ ವಿ ಹರಳಯ್ಯ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಎಂ ಎಂ ವಾಲಿಕಾರ್ ಶಿಕ್ಷಕರ ಸೊಸೈಟಿ ಮಾಜಿ ಅಧ್ಯಕ್ಷರಾದ ಶ್ರೀ ಪಿ ಎಸ್ ಚಾಂದಕವಟೆ, ಶ್ರೀಎಂ ಟಿ ಮಾಶಾಳ ಜಿಪಿಟಿ ಅಧ್ಯಕ್ಷರಾದ ಶ್ರೀ ಶಂಕರ್ ಕೋಳೆಕರ ನೇತೖತ್ವದಲ್ಲಿ ಹಾಗೂ ಎಲ್ಲಾ ವೃಂದ ಸಂಘಗಳ ಅಧ್ಯಕ್ಷರುಗಳ,ಪದಾಧಿಕಾರಿಗಳು ಮುಖ್ಯ ಗುರುಗಳು ಹಾಗೂ ತಾಲೂಕಿನ ಎಲ್ಲಾ ಶಿಕ್ಷಕರು ಸಮ್ಮುಖದಲ್ಲಿ ಇಂಡಿ ನಗರದ ಶ್ರೀ ಬೀರಪ್ಪ ದೇವರ ದೇವಾಲಯದಲ್ಲಿ ಸಭೆ ಸೇರಿದ ಸುಮಾರು 200 ಕ್ಕೂ ಹೆಚ್ಚು ಶಿಕ್ಷಕ ಬೆಂಬಲಿಗ ಸದಸ್ಯರೊಂದಿಗೆ ಶ್ರೀ ಬೀರಲಿಂಗೇಶ್ವರ ಗದ್ದುಗೆ ಪೂಜೆಯನ್ನು ಸಲ್ಲಿಸಿ ಕಾಲ್ನಡಿಗೆ ಮುಖಾಂತರ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಕಾರ್ಯಾಲಯಕ್ಕೆ ಆಗಮಿಸಿ ಚುನಾವಣಾ ಅಧಿಕಾರಿಗಳಾದ ಶ್ರೀ ನಿಜಣ್ಣ ಕಾಳೆ ಅವರಿಗೆ 17 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಾಯಿತು.
ಸಾಮಾನ್ಯ ವಿಭಾಗದಲ್ಲಿ ಎಸ್ ವಿ ಹರಳಯ್ಯ, ವೈಟಿ ಪಾಟೀಲ್, ಎಚ್ಎಂ ಮುಜಾವರ್, ಪಿ ಜಿ ಕಲ್ಮನಿ, ಎಸ್ ಎ ಭಾಗಾಯತ್, ಎಪ್ ಎಂ.ಭೋರಾಮಣಿ, ಎಸ್ ಸಿ ಗಿಡಗಂಟಿ, ವಿ ಕೆ ಚವ್ಹಾಣ, ಡಿ ಎಸ್ ಕಣಮಸ್, ಎ ಎ ವಾಲಿಕರ್,
ಮಹಿಳಾ ಮೀಸಲು: ಶ್ರೀದೇವಿ ಮುಗುಳಿ, ಆರ್ ಆರ್ ಫಸ್ಟ್,
ಅ ವರ್ಗ ಪಿ ಎಸ್ ಚಾಂದಕವಟೆ,, ಎಂ ಡಿ ಕಂಠೀಕರ್,
ಬ ವರ್ಗ ಕಾಂತು ಇಂಡಿ, ಪ. ಪಂ.ಮೀಸಲು ಬಿ ಎಸ್ ಸೊನ್ನದ್ಪ. ಜಾತಿ ಮೀಸಲು ಬಿ ಎಂ ವಠಾರ