ಮುದ್ದೇಬಿಹಾಳ:ಯೋಗವನ್ನು ನಿತ್ಯ ಮಾಡುವುದರಿಂದ ನಮ್ಮ ಆರೋಗ್ಯ ಸುಧಾರಿಸುತ್ತದೆ. ಮಕ್ಕಳು ನಿತ್ಯ ಯೋಗಾಭ್ಯಾಸ ರೂಢಿಸಿಕೊಂಡರೆ ಅವರಲ್ಲಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎಂದು ಯೋಗ ಶಿಕ್ಷಕಿ ಡಾ.ರಾಜೇಶ್ವರಿ ಗೂಳಿ ಹೇಳಿದರು. ಅವರು ಶನಿವಾರ ಪಟ್ಟಣದ ಬಸವ ವಿದ್ಯಾಪ್ರಸಾರಕ ಸಂಸ್ಥೆಯ ಪ್ರಾರ್ಥನಾ ವಿದ್ಯಾಮಂದಿರದಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಚೆನ್ನಾಗಿ ಓದಬೇಕು. ದೇಶಕ್ಕೆ ಒಳ್ಳೆಯ ಕೊಡುಗೆ ನೀಡುವ ಭವಿಷ್ಯದ ನಾಗರಿಕರಾಗಬೇಕು. ಸತ್ಯವನ್ನು ನುಡಿಯುವ, ಸಂತೋಷದಿಂದ ನಿರಂತರ ಬದುಕುವ ಉಲ್ಲಾಸದ ಬದುಕು ಯೋಗದಿಂದ ದೊರೆಯುತ್ತದೆ. ಈಚೆಗೆ ಪ್ರತಿಯೊಂದು ಕೆಲಸಗಳನ್ನು ಯಂತ್ರಗಳು ಮಾಡುತ್ತಿದ್ದು, ಮನುಷ್ಯ ಸೋಮಾರಿಯಾಗುತ್ತಿದ್ದಾನೆ. ಮಹಿಳೆಯರು ನಿತ್ಯ ತಮ್ಮ ಮನೆಗೆಲಸಗಳನ್ನು ಸ್ವತಃ ಮಾಡಿದರೆ ಅದೂ ಯೋಗದ ಭಾಗವೇ ಆಗಿದೆ. ಇದರಿಂದ ಹಣವೂ ಉಳಿದು ಆರೋಗ್ಯ ಸುಧಾರಿಸುತ್ತದೆ ಎಂದವರು ಹೇಳಿದರು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸುಧೀರ ನಾವದಗಿ, ಕಾರ್ಯದರ್ಶಿ ನಿಂಗಪ್ಪ ಚಟ್ಟೇರ, ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ವಿನೋದ ಪಟಗಾರ, ಪ್ರೌಢಶಾಲೆಯ ಮುಖ್ಯಗುರುಗಳಾದ ದಿವ್ಯಾ ಹೆಬ್ಬಾರ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ರಾಜು ಜೋಳದ, ಪ್ರಭುದೇವ ಕಲಬುರ್ಗಿ, ಮುತ್ತಣ್ಣ ಕಡಿ, ಪ್ರವೀಣ ನಾಗಠಾಣ, ಜಗದೀಶ ಕಂಠಿ, ಚಂದ್ರಶೇಖರ ಕಡಿ, ಮಹಾಬಲೇಶ್ವರ ಗಡೇದ ಇದ್ದರು. ಶಿಕ್ಷಕರಾದ ಪರಶುರಾಮ ರತ್ನಾಕರ, ರಾಜು ಜಾಧವ, ಫಕೀರಪ್ಪ ಬೀಜಗುಪ್ಪಿ, ಮುತ್ತಣ್ಣ ನೆರಬೆಂಚಿ, ರಾಮನಗೌಡ ಬಿರಾದಾರ, ಹಣಮಂತ ಜಯವಾಡಗಿ ಮತ್ತು ಶಿಕ್ಷಕಿಯರಾದ ಗೀತಾ ಉಗ್ಗನ್ನವರ, ತ್ರಿವೇಣಿ ರಾಠೋಡ, ಅಂಜನಾ ಬಸರಕೋಡ, ಶಾರದಾ ಗೌಡ, ಸಮರಿನ ದೇಸಾಯಿ, ಸುಗ್ಲಾ ಕಂಠಿ, ಸವಿತಾ ಹಿರೇಮಠ, ಭವಾನಿ ನಾಯ್ಕ, ರೇಷ್ಮಾ ಎಚ್, ಲಾವಣ್ಯ ಶಿರೋದ್ಕರ, ಸೈದಾ ಫಾತಿಮಾ, ಸೌಜನ್ಯಾ ಬೂದಿಹಾಳ ಹಾಜರಿದ್ದರು.ಹಣಮಂತ ಜಯವಾಡಗಿ ನಿರೂಪಿಸಿ, ವಂದಿಸಿದರು.