ಬ್ರಾಹ್ಮಣ ಮಹಾಸಭಾಕ್ಕೆ ವೆಂಕಟೇಶ ಕುಲಕರ್ಣಿ ನೇಮಕ
ಇಂಡಿ : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರದ ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ತಾಲೂಕಿನ ಅಹಿರಸಂಗ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೊಸೈಟಿಯ ಅಧ್ಯಕ್ಷರು ಹಾಗು ತಾಲೂಕ ಬ್ರಾಹ್ಮಣ ಸಂಘದ ಕಾರ್ಯದರ್ಶಿಗಳಾದ ವೆಂಕಟೇಶ.ಎಸ್. ಕುಲಕರ್ಣಿ ಹಾಗು ಸಂಪತರಾವ. ಎಸ್. ಕುಲಕರ್ಣಿ(ವಿಜಯಪುರ) ಯವರನ್ನು ವಿಜಯಪುರ ಜಿಲ್ಲೆಯ ಅಖಿಲ ಕರ್ನಾಟಕ ಮಹಾಸಭಾದ ಚುನಾಯಿತ ಪ್ರತಿನಿಧಿ ಸತೀಶ್ಚಂದ್ರ ಕುಲಕರ್ಣಿಯವರ ಕೋರಿಕೆ ಮೇರೆಗೆ ನೇಮಿಸಲಾಗಿದೆಯೆಂದು ರಾಜ್ಯ ಅಧ್ಯಕ್ಷ ಎಸ್. ರಘನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೆಂಕಟೇಶ ಕುಲಕರ್ಣಿಯವರ ಆಯ್ಕೆಗೆ ನ್ಯಾಯವಾದಿಗಳಾದ ಸತೀಶ್ಚಂದ್ರ ಕುಲಕರ್ಣಿ, ಎನ್.ಕೆ.ನಾಡಪುರೋಹಿತ, ಮಹೇಶ ಜೋಶಿ, ಪ್ರಸನ್ನ ನಾಡಗೌಡ, ಜಗನಾಥ ಪಾಟೀಲ, ಸಂಜೀವ ಚಟ್ಟರಕಿ,ಮನೋಜ ಕುಲಕರ್ಣಿ,ಮುಕುಂದ ಆಧ್ಯ, ಆನಂದ ಕುಲಕರ್ಣಿ, ಪ್ರಸನ್ನ ದೇಶಪಾಂಡೆ, ಸಂಜೀವ ದೇಶಪಾಂಡೆ, ಕೆ.ಡಿ. ಜೋಶಿ, ಶ್ರೀನಿವಾಸ ಕುಲಕರ್ಣಿ, ರಂಗರಾಜ ಕುಲಕರ್ಣಿ ಅಭಿನಂದಿಸಿದ್ದಾರೆ.