ವರದಿ: ಬಸವರಾಜ ಕುಂಬಾರ,ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಲ್ಲೂಕಿನ ಬಿದರಕುಂದಿ ಗ್ರಾಮದಲ್ಲಿ11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸರಕಾರಿ ಆದರ್ಶ ವಿದ್ಯಾಲಯ ಸರಕಾರಿ ಗ್ರೇಡ್1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಸ್ಲಂ.ಸಿ.ಕೆರೂರ ಮತ್ತು ಎನ್.ಎಸ್.ಬಿರಾದರ ಅವರ ನೇತೃತ್ವದಲ್ಲಿ ಯೋಗಾಸನವನ್ನು ಮಾಡಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಅಷ್ಟಾಂಗ ಯೋಗದ ಯಮ, ನಿಯಮ, ಆಸನ, ಪ್ರತ್ಯಹರ, ಪ್ರಾಣಾಯಾಮ ,ಧಾರಣ, ಧಾನ್ಯ, ಸಮಾಧಿ, ಬಗ್ಗೆ ಬಿಡಿ ಬಿಡಿಯಾಗಿ ತಿಳಿಸಲಾಯಿತು. ಮತ್ತು ಸೂರ್ಯ ನಮಸ್ಕಾರದ 12 ಹಂತಗಳಾದ ನಮಸ್ಕಾರಾಸನ, ಹಸ್ತಉತ್ತನಾಸನ , ಹಸ್ತಪಾದಾಸನ , ಏಕಪಾದ ಪ್ರಸಾರಸನ , ದ್ವಿಪಾದ ಪ್ರಸಾರಸನ , ಪರ್ವತಾಸನ , ಶಶಾಂಕಸನ ಸಾಷ್ಟಾಂಗ ನಮಸ್ಕಾರ ಭುಜಂಗಾಸನ, ಮರಳಿ ಏಕಪಾದ ಪ್ರಸರಾಸನ ಹಸ್ತಪಾದಾಸನ ನಮಸ್ಕಾರಾಸನವನ್ನು 423 ಮಕ್ಕಳಿಗೆ ಮಾಡಿಸಲಾಯಿತು. ವೇದಿಕೆ ಮೇಲಿದ್ದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಡಾ ಮಲ್ಲಿಕಾರ್ಜುನ್ ಬೆಳಗಲ್ಲ 5,000 ವರ್ಷಗಳ ಹಿಂದೆ ಸಿಂಧೂ ನದಿ ನಾಗರಿಕತೆಯಲ್ಲಿ ಯೋಗದ ಬಗ್ಗೆ ಉಲ್ಲೇಖವಿದೆ. ಸಂಸ್ಕೃತ ಪದವಾದ ಯುಜ್ ದಿಂದ ಬಂದಿದೆ ಯೋಗ ಅಂದರೆ ಕೂಡಿಸು ಜೋಡಿಸು ಲೀನವಾಗು ಎಂದರ್ಥ, ಅಂದರೆ ಮನಸ್ಸನ್ನು ಪರಮಾತ್ಮನಲ್ಲಿ ಜೋಡಿಸುವುದು, ಈ ಯೋಗವನ್ನು ಋಷಿ ಮುನಿಗಳು ತಪಸ್ಸು ಮಾಡುವಾಗ ಏಕಾಗ್ರತೆಗಾಗಿ ಯೋಗವನ್ನು ತಪಸನ್ನು ಅಳವಡಿಸಿಕೊಳ್ಳುತ್ತಿದ್ದರು ಎಂದು ತಿಳಿಸಿದರು . ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ತಾಲೂಕ ದೈಹಿಕ ಶಿಕ್ಷಣ ಪರೀಕ್ಷಕರಾದ ಬಿ ವೈ ಕವಡಿ ಅವರು ಯೋಗದಿಂದ ರೋಗಮುಕ್ತ ಪ್ರತಿದಿನ ಯೋಗಾಸನವನ್ನು ಬೆಳಗ್ಗೆ ಮತ್ತು ಸಂಜೆ ಕನಿಷ್ಠ ಅರ್ಧದಿಂದ ಒಂದು ಗಂಟೆವರೆಗೆ ಮಾಡಿದ್ದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಒತ್ತಡ ಮುಕ್ತನಾಗುತ್ತಾನೆ ಒಳ್ಳೆ ಆರೋಗ್ಯವಂತನಾಗುತ್ತಾನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲೆಯ ಮುಖ್ಯೋಪಾಧ್ಯರಾದ ಅನ್ಯ ಕುಮಾರ್ ರಾಥೋಡ್ ಯೋಗವನ್ನು ಪ್ರತಿದಿನ ಅಳವಡಿಸಿಕೊಳ್ಳಿ ಕೇವಲ ದಿನಾಚರಣೆ ದಿವಸ ಮಾಡುವುದು ಅಲ್ಲ ಪ್ರತಿದಿನ ರೂಡಿಸಿಕೊಂಡರೆ ದಿನವಿಡಿ ಲವ ಲವಕೆಯಿಂದ ಇರಬಲ್ಲರು ಮತ್ತು ಏಕಾಗ್ರತೆ ಬೆಳೆಯುತ್ತದೆ ಎಂದರು.
ಮಕ್ಕಳಿಂದ ಹಲವಾರು ಭಂಗಿಯ ಯೋಗ ಪ್ರದರ್ಶನವನ್ನು ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಮುದ್ದು ಮಕ್ಕಳು ಶಿಕ್ಷಕರಾದ ಬಾಲಾಜಿ ಸುಧಾಕರ್, ಸಂತೋಷ್ ಪಾಟೀಲ, ಐ. ಎಸ್. ಮಠ, ಬಶೀರ್ ಅಹ್ಮದ್ ಭಗವಾನ್, ಮಂಜು ಹಿರೇಮಠ , ವೆಂಕಟೇಶ್, ಶಿಕ್ಷಕಿಯರು,ಅತಿಥಿ ಶಿಕ್ಷಕರು ,ಎಲ್ಲರೂ ಪಾಲ್ಗೊಂಡಿದ್ದರು.