ಧಾರವಾಡದಿಂದ ನುರಿತ ಶಿಕ್ಷಣ ತಜ್ಞರು ತರಬೇತುದಾರರಿಂದ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಹಾಗೂ ಸರಕಾರಿ ಹುದ್ದೆಗಳನ್ನು ಪಡೆಯಲು ಸಾಧ್ಯ
ಸಂಯೋಜಿತ ಪದವಿಗಳ ಕಾರ್ಯಗಾರ ನಮ್ಮ ಭಾಗದ ವಿದ್ಯಾರ್ಥಿಗಳಿಗಾಗಿ ಮದರಿಯವರು ಮಾಡಿದ ಕಾರ್ಯ ಅಮೋಘ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ :ಸಂಯೋಜಿತ ಪದವಿಗಳ ಕಾರ್ಯಗಾರ ನಮ್ಮ ಭಾಗದ ವಿದ್ಯಾರ್ಥಿಗಳಿಗಾಗಿ ಮದರಿಯವರು ಮಾಡಿದ ಕಾರ್ಯ ಅಮೋಘದದು ಎಂದು ಹಿರಿಯ ಸಾಹಿತಿ ನಿವೃತ್ತ ಪ್ರಾಧ್ಯಾಪಕ ಬಿ ಎಂ ಹಿರೇಮಠ ಹೇಳಿದರು. ಶುಕ್ರವಾರ ಸಂಜೆ ಪಟ್ಟಣದ ಹೂಳ್ಕರ ಬಡಾವಣೆಯ ಅಹಿಲ್ಯಾದೇವಿ ಹೂಳ್ಕರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಧಾರವಾಡ ವಿವಿ ನಿವೃತ್ತ ಕುಲಪತಿ ಹೆಚ್ ಬಿ ವಾಲಿಕಾರ ಮಾರ್ಗದರ್ಶನದಲ್ಲಿ ನಡೆದ ೨ ದಿನ ನಡೆದ ಸಂಯೋಜಿತ ಪದವಿಗಳ ಕಾರ್ಯಾಗಾರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದಲ್ಲಿ ಭಾರತದಲ್ಲಿಯ ಶಿಕ್ಷಣ ಪದ್ದತಿ ಶಿಕ್ಷಣ ಕಲಿಯಲು ಏಷ್ಟೆಲ್ಲಾ ಕಷ್ಟಪಡಬೇಕಿತ್ತು ಎಂದು ವಿವರಿಸಿದರು , ಸಂಯೋಜಿತ ಪದವಿಗಳ ಕಾರ್ಯಗಾರದ ಮೂಲಕ ವಿದ್ಯಾರ್ಥಿಗಳಿಗೆ ಸರಕಾರಿ ಹುದ್ದೆಗಳನ್ನು ಪಡೆಯಲು ನೇರವಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಕಾರ್ಯದರ್ಶಿ ಶಿಕ್ಷಣ ಪ್ರೇಮಿ ಮಲ್ಲಿಕಾರ್ಜುನ ಮದರಿ ಮಾತನಾಡಿ ಸಂಯೋಜಿತ ಪದವಿಗಳ ಕಾರ್ಯಗಾರದ ಪರಿಕಲ್ಪನೆ ನೀಡಿದವರು ಧಾರವಾಡ ವಿವಿ ನಿವೃತ್ತ ಕುಲಪತಿಗಳಾದ ಹೆಚ್ ಬಿ ವಾಲಿಕಾರ ಅವರು ಕಾರ್ಯಗಾರದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಧಾರವಾಡದಿಂದ ನುರಿತ ಶಿಕ್ಷಣ ತಜ್ಞರು ತರಬೇತುದಾರರಿಂದ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಹಾಗೂ ಸರಕಾರಿ ಹುದ್ದೆಗಳನ್ನು ಪಡೆಯಲು ಸಕಾರಾತ್ಮಕ ಚಿಂತನೆ ತುಂಬಿದ್ದಾರೆ ಎಂದ ಅವರು ನಮ್ಮ ಪದವಿ ವಿದ್ಯಾರ್ಥಿಗಳಿಗೆ ಹೈಬ್ರೀಡ್ ಕ್ಲಾಸ್ ( ಸ್ಮಾರ್ಟ್ ಕ್ಲಾಸ್) ಮೂಲಕ ತರಬೇತಿ ನೀಡಲಾಗುತ್ತದೆ ಹಾಗೆ ಹೊರಗಿನ ವಿದ್ಯಾರ್ಥಿಗಳಿಗೆ ಸಹ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡುತ್ತವೆ ನಮ್ಮ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.
ಬಿ .ಜಿ ಜಗ್ಗಲ ವಕೀಲರು ಮಾತನಾಡಿದರು. ಕಾರ್ಯಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಳಾದ ತಿಪ್ಪಣ್ಣ ಓಡಿ, ಕಾವೇರಿ ಪತ್ತಾರ ಅನಿಸಿಕೆಯನ್ನು ಹಂಚಿಕೊಂಡರು.
ಎರಡನೇ ದಿನದ ಕಾರ್ಯಾಗಾರದಲ್ಲಿ ಡಾ.ಹೆಚ್ ಬಿ ವಾಲಿಕಾರ ,ಪ್ರಿಯಾಂಕಾ ಪತ್ತಾರ,ಡಾ.ಕೆ ಅಶೋಕ,ಶೇಖಪ್ಪ ಮೇಟಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆ ನಿರ್ದೇಶಕ ಕಿರಣ ಮದರಿ,
ಪಿ ಎಲ್ಡಿ ಬ್ಯಾಂಕ್ ನ ಅಧ್ಯಕ್ಷ ಬಿ.ಕೆ ಬಿರಾದಾರ,ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ ಎಂ ಬೆಲಗಲ್ಲ,
ಲೆಕ್ಕ ವ್ಯವಸ್ಥಾಪಕ ಬಸವರಾಜ ಬಿಜ್ಜೂರ,ಅಡಳಿತಧಿಕಾರಿ ಬಿ ಜಿ ಬಿರಾದಾರ, ಪದವಿ ಪ್ರಾಂಶುಪಾಲರು ಆರ್ ಎಸ್ ಜಡಗಿ, ಪಿಯು,ಪ್ರಾಚಾರ್ಯಎಂ ಎಂ ಧನೂರ,ಮುಖ್ಯ ಗುರುಗಳು ಪ್ರಶಾಂತ ಬಿರಾದಾರ, ಉಪನ್ಯಾಸಕರಾದರಂಗಸ್ವಾಮಿ ಎಸ್,ವಿರೇಶ ಹುಲಿಕೆರಿ,ರವಿ ಛಲವಾದಿ,ರವಿ ಜಗಲಿ, ಬಸವರಾಜ ಗುಡಲಮನಿ,ಶ್ತಿ ಎಸ್ ಎಂ ದೇಶಮುಖ
ಎಸ್ ಎಂ ನದಾಫ, ಎಂ ಸಿ ಹೆಬ್ಬಾಳ,ಎಂ ಎಚ್ ವನಕಿಹಾಳ, ಎಸ್ ಯು ತಾರಾನಾಳ, ಪಿ ಬಿ ಕುಲಕರ್ಣಿ,ಎ ಎಫ್ ಭುವಾಜಿ, ಜಯಶ್ರೀ ಕುಂಬಾರ, ಜಿ ಬಿ ನಾಗರಾಳ,ಎಸ್ ಎಲ್ ಮಡಿವಾಳರ, ಎನ್ ಟಿ ಗೌಡರ,ಕೆ ಬಿ ರೂಡಗಿ,ಸೇರಿದಂತೆ ಉಪಸ್ಥಿತರಿದ್ದರು.