ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ; ಮಂಗಳವಾರ ರಾತ್ರಿ ತಾಲೂಕಿನ ಮದರಿ ಗ್ರಾಮದ ಮುಳಗಡೆಗೂಂಡ ಹಳೆಯ ಮದರಿ ಗ್ರಾಮದಲ್ಲಿ ನಿಧಿಗಾಗಿ ಭೂಮಿ ಅಗೆಯುತ್ತಿದ್ದ ತಂಡವನ್ನು ಮದರಿ ಗ್ರಾಮಸ್ಥರು ಹಿಡಿದು ಪೂಲೀಸ್ ರ ವಶಕ್ಕೆ ನೀಡಿದ್ದಾರೆ ಪೊಲೀಸ್ ್ ರ ಸಮ್ಮುಖದಲ್ಲಿ ನಿಧಿ ಶೋಧಿಸಲು ಮದರಿ ಗ್ರಾಮದ ಧಣಿಗಳಾದ ಮಲಕೇಂದ್ರರಾವ್ ಮಲ್ಲನಗೌಡ ನಾಡಗೌಡರ ಎನ್ನುವರು ಕರೆಸಿದ್ದಾರೆಂದು ತಿಳಿಸಿದ್ದಾರೆ ಆ ಕುರಿತು ವಿಡಿಯೋ ಸಾಕ್ಷ್ಯ ಇದ್ಯಾಗೂ ಸಹ ಪೂಲೀಸರು ಎ೧ ಆರೋಪಿಯಾಗಿ ಗ್ರಾಮದ ಮಲಕೇಂದ್ರಗೌಡ ನಾಡಗೌಡರನ್ನು ಮಾಡುವುದು ಬಿಟ್ಟು ಆರೋಪಿತರಮೇಲೆ ಕೇಸು ದಾಖಲಿಸಲಾಗಿದೆ ಎಂದು ವಾಲ್ಮೀಕಿ ಸಮಾಜದ ಯುವ ಮುಖಂಡ ಶಿವರಾಯ ಕನ್ನೊಳ್ಳಿ ಹೇಳಿದರು ಗುರುವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪೂಲೀಸ್ ರ ಎಫ್ ಐ ಆರ್ ನಲ್ಲಿ ಪೊಲೀಸ್ ರು ಪಂಚಾಯತಿ ಪಿಡಿಒ,ಕಾರ್ಯದರ್ಶಿ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ನಿಧಿಗಳ್ಳರನ್ನು ಸ್ಥಳದಲ್ಲಿ ಇದ್ದರೆಂದು ತಿಳಿಸಿದ್ದಾರೆ ಆದರೆ ನಿಧಿಗಳ್ಳರನ್ನು ಮದರಿ ಗ್ರಾಮಸ್ಥರು ನಾವುಗಳು ಹಿಡಿದ್ದಿದ್ದೇವೆ ಪಿಎಸೈ ಸಂಜಯ ತಿಪರೆಡ್ಡಿ ಸ್ಥಾನಿಕ ಪಂಚನಾಮೆಗೆ ಬಂದಾಗ ಸಂಬಂಧಿಸಿದ ಇಲಾಖೆ ಆರ್ & ಆರ್ ಅವರಿಂದ ಅಥವಾ ಗ್ರಾಮಸ್ಥರಿಂದ ಕಂಪ್ಲೇಟ್ ಪಡೆಯಿರಿ, ನಿಧಿಗಳ್ಳರನ್ನು ಇಲ್ಲಿಗೆ ಕರೆಯಿಸಿದವರ ಹೆಸರು ಹೇಳಿದ್ದಾರೆ ಅವರನ್ನು ಯಾಕೆ ಬಂಧಿಸಿಲ್ಲವೆಂದಾಗ ನಿನ್ನಿಂದ ನಾನು ಕಾನೂನು ಕಲಿಯಬೇಕಿಲ್ಲ ನಿನ್ನ ಕೇಳಿ ಅರೆಸ್ಟ್ ಮಾಡಬೇಕಾ? ನೀನು ಐಜಿ ಅವರ ಬಳಿ ಕಂಪ್ಲೇಟ್ ಮಾಡಿದ್ದಿಯಾ ಏನೆ ಹೇಳವುದಿದ್ದರೂ ಅವರ ಬಳಿ ಹೇಳಿ ಎನ್ನುತ್ತಾರೆ ಇದರಿಂದ ನಮಗೆ ಸಂಶಯವಿದೆ ಪ್ರಭಾವಿಗಳನ್ನು ಪೂಲೀಸ್ ರು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ನಿಧಿಗಳ್ಳರ ಬಂಧನದ ವೇಳೆಯ ಧಣಿಗಳ ಹೆಸರು ಹೇಳಿದ ವಿಡಿಯೋ ಮೊಬೈಲ್ ತೋರಿಸಿದರು.
ಈ ಹಿಂದೆಯೂ ರಕ್ಕಸ ತಂಗಡಗಿ ನಡೆದ ಈ ಪ್ರದೇಶದಲ್ಲಿ ನಿಧಿಗಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ ಹೀಗಾಗಿ ಈ ಪ್ರದೇಶ ಸಂರಕ್ಷಣೆ ಮಾಡಬೇಕಾದ ಪೂಲೀಸ್ ರೇ ಈಗ ಆರೋಪಿತರ ಪರವಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು
ದಲಿತ ಮುಖಂಡ ಹರೀಶ್ ನಾಟಿಕಾರ ಮಾತನಾಡಿ ಮದರಿ ಗ್ರಾಮದಲ್ಲಿ ನಿಧಿಗಳ್ಳರು ಚಿನ್ನ ಪತ್ತೆ ಮಾಡುವ ಉಪಕರಣ ಸಮೇತ ಸಿಕ್ಕಿಬಿದ್ದು ತಮ್ಮನ್ನು ಯಾರು ಕರೆಸಿದ್ದಾರೆಂದು ಹೇಳಿದರು ಪೂಲೀಸ್ ರು ಅವರ ವಿರುದ್ಧ ಕ್ರಮ ಕೈಗೂಳ್ಳದೆ ಆರೋಪಿತರನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ ಮದರಿ ಗ್ರಾಮ ನಾಡಗೌಡರ ಮನೆತನದ ಕಪಿಮುಷ್ಟಿಯಲ್ಲಿದೆ
ಪೂಲೀಸ್ ವರಿಷ್ಠಾಧಿಕಾರಿಗಳು ಮುದ್ದೇಬಿಹಾಳ ಸಿಪಿಐ ಪಿಎಸೈ ವಿರುದ್ಧ ತನಿಖೆ ಮಾಡಿಸಬೇಕು ತಪ್ಪಿತಸ್ಥರ ವಿರುದ್ಧ ಇನ್ನೂಂದು ಎಫ್ ಐ ಆರ್ ದಾಖಲಿಸಿಬೇಕು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕೆಲಸವನ್ನು ಮಾಡುತ್ತಿದ್ದಾರೆ ಇದು ನಿಲ್ಲದೆ ಹೋದರೆ ಮದರಿ ಗ್ರಾಮಸ್ಥರಿಂದ ದಲಿತಪರರಿಂದ ಪೂಲೀಸ್ ರ ಈ ನಡೆಯ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.