ಭೀಮಾತೀರ ನಕಲಿ ಎನ್ಕೌಂಟರ್ ಪ್ರಕರಣ: ವಿಚಾರಣೆ ಜುಲೈ 1ಕ್ಕೆ ಮುಂದೂಡಿಕೆ
ಫಯಾಜ್ಅಹ್ಮದ ಬಾಗವಾನ ಜಿಲ್ಲಾ ವರದಿಗಾರರು ವಿಜಯಪುರ
ವಿಜಯಪುರ: ಭೀಮಾತೀರದ ಹೆಸರಾಂತ ಹಂತಕರು ಧರ್ಮರಾಜ್ ಚಡಚಣ ಹಾಗೂ ಅವರ ಸಹೋದರ ಗಂಗಾಧರ ಅವರ ನಕಲಿ ಎನ್ಕೌಂಟರ್ ಸಂಬಂಧಿತ ಪ್ರಕರಣದಲ್ಲಿ ವಿಜಯಪುರ ಜಿಲ್ಲಾ ನ್ಯಾಯಾಲಯ ವಿಚಾರಣೆಯನ್ನು ಜುಲೈ 1ಕ್ಕೆ ಮುಂದೂಡಿದೆ.
ಸೋಮವಾರ ನಡೆದ ವಿಚಾರಣೆಯಲ್ಲಿ ಆರೋಪಿಗಳಾದ ಮಹಾದೇವ ಭೈರಗೊಂಡ ಮತ್ತು ಇತರ 16 ಮಂದಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ಪ್ರಕರಣದಲ್ಲಿ ಧರ್ಮರಾಜ್ ಚಡಚಣ ನಕಲಿ ಎನ್ಕೌಂಟರ್ಗೆ ಒಳಗಾಗಿದ್ದರೆಂದು ಆರೋಪವಿದ್ದು, ಈ ಸಂದರ್ಭದಲ್ಲಿ ಚಡಚಣ ಪೊಲೀಸ್ ಠಾಣೆಯ ಪಿಎಸ್ಐ ಆಗಿ ಗೋಪಾಲ್ ಹಳ್ಳೂರ್ ಕಾರ್ಯನಿರ್ವಹಿಸುತ್ತಿದ್ದರು.
ಈ ಇಬ್ಬರೂ ಸಹೋದರರ ಹತ್ಯೆ ಪ್ರಕರಣದಲ್ಲಿ ಗೋಪಾಲ್ ಹಳ್ಳೂರ್ ಸಹ ಪ್ರಮುಖ ಆರೋಪಿಯಾಗಿದ್ದು, ಇವರು ಸಹ ನ್ಯಾಯಾಲಯದ ಮುಂದಾಗಿದ್ದರು. ಮುಂದಿನ ವಿಚಾರಣೆಯನ್ನು ಜುಲೈ 1ರಂದು ನಡೆಸಲು ನ್ಯಾಯಾಲಯ ತೀರ್ಮಾನಿಸಿದೆ.