ಸಂಕಷ್ಟದ ರೈತರಿಗೆ ಅನುಗ್ರಹ ಕೊಡುಗೆ
ಆಕಸ್ಮಿಕವಾಗಿ ಮೃತಪಟ್ಟ ಜಾರುವಾರುಗಳಿಗೆ ಸರಕಾರದಿಂದ ಪರಿಹಾರ | ರೂ ಬಿಡುಗಡೆ | ಮಾಲಿಕರ ಬ್ಯಾಂಕ ಖಾತೆಗೆ ಜಮೆ
ಇಂಡಿ : ಆಕಸ್ಮಿಕವಾಗಿ ಮೃತಪಟ್ಟ ಜಾನುವಾರುಗಳಿಗೆ ರಾಜ್ಯ ಸರಕಾರದ ಅನುಗ್ರಹ ಕೊಡುಗೆ ಯೋಜನೆಯಡಿ ನೀಡುವ ಪರಿಹಾರ ಧನವು ತಾಲೂಕಿನಲ್ಲಿ ೭೮ ರಾಸುಗಳಿಗೆ ಬಂದಿದ್ದು ೧೩೨ ಜಾನುವಾರಗಳ ಮಾಲಿಕರಿಗೆ ಪರಿಹಾರ ಇನ್ನೂ ದೊರೆತಿಲ್ಲ.
೨೦೨೪-೨೫ ನೇ ಸಾಲಿನಲ್ಲಿ ತಾಲೂಕಿನಲ್ಲಿ ಜಾನುವಾರುಗಳು ಆಕಸ್ಮಿಕವಾಗಿ ೨೧೦ ಮೃತ ಪಟ್ಟಿದ್ದು ಈ ಪೈಕಿ ೭೮ ರಾಸುಗಳಿಗೆ ಪರಿಹಾರ ಪಾವತಿಯಾಗಿದೆ. ಇನ್ನುಳಿದ ೧೩೨ ಜಾನುವಾರುಗಳಿಗೆ ಪರಿಹಾರ ಧನ ಬರಬೇಕಿದೆ.
ಒಂದು ಹಸು, ಎತ್ತು ಎಮ್ಮೆಗೆ ಹತ್ತು ಸಾವಿರ ದಂತೆ ಈಗಾಗಲೇ ಜಾನುವಾರುಗಳಿಗೆ ೭ ಲಕ್ಷ ೮೦ ರೂ ಅವುಗಳ ಮಾಲೀಕರ ಬ್ಯಾಂಕ ಖಾತೆಗೆ ಜಮೆ ಆಗಿದೆ ಎಂದು ಪಶು ಸಂಗೋಪನೆ ಇಲಾಖೆ ಹಿರಿಯ ವೈದ್ಯಾಧಿಕಾರಿ ಡಾ. ರಾಜಕುಮಾರ ಅಡಕಿ ಮಾಹಿತಿ ನೀಡಿದರು.
ಹೈನುಗಾರಿಕೆಯಿಂದ ಹಾಗೂ ಇನ್ನೂ ಕೆಲವು ರೈತರು ಒಂದೆರಡು ಹಸುಗಳನ್ನು ಸಾಕಿಕೊಂಡು ತಮ್ಮ ಜೀವನ ಸಾಗಿಸಲು ಸಾಲ ಮಾಡಿ ಹಸುಗಳನ್ನು ತಂದಿದ್ದರು. ಆದರೆ ಅವುಗಳು ಆಕಸ್ಮಿಕವಾಗಿ ಮೃತಪಟ್ಟಂತಹ ಸಂದರ್ಭದಲ್ಲಿ ದಿಕ್ಕು ದೋಚದಂತಾಗುತ್ತದೆ. ಅಂತಹವರಿಗೆ ರಾಜ್ಯ ಸರಕಾರ ಅನುಗ್ರಹ ಯೋಜನೆಯಡಿ ಜಾನುವಾರುಗಳಿಗೆ ಹತ್ತು ಸಾವಿರ ರೂ ನೀಡಲಾಗುತ್ತದೆ. ಆದರೆ ೨೦೨೪-೨೫ ನೇ ಸಾಲಿನಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದ ಜಾನುವಾರುಗಳಿಗೆ ಬರುವ ಪರಿಹಾರ ಧನವು ಸರಕಾರದ ಮಟ್ಟದಲ್ಲಿ ಸಂಪೂರ್ಣವಾಗಿ ಬಿಡುಗಡೆಯಾಗದ ಕಾರಣ ಕೆಲವು ರೈತರು ಸಂಕಷ್ಟಕ್ಕೆ ಸಿಲುಕಿ ಮುಂದೊAದು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ರಾಜ್ಯ ಸರಕಾರ ಅನುಗ್ರಹ ಕೊಡುಗೆ ಯೋಜನೆಯಡಿ ಕೇವಲ ಹಸು ಎತ್ತು ಎಮ್ಮೆಗಳಿಗೆ ಮಾತ್ರವಲ್ಲ ಆಕಸ್ಮಿಕವಾಗಿ ಮೃತಪಟ್ಟ ಕುರಿ ಹಾಗೂ ಮೇಕೆಗಳಿಗೂ ವಿತರಿಸಲಾಗುತ್ತಿದೆ. ಈ ಯೋಜನೆಯಡಿ ತಾಲೂಕಿನಲ್ಲಿ ಮೃತಪಟ್ಟಿರುವ ೯೧ ಕುರಿ ಮತ್ತು ಮೇಕೆಗಳಿಗೆ ೯೧ ಕ್ಕೆ ಪರಿಹಾರಬಂದಿದೆ. ೨೦೨೫ -೨೬ ರಲ್ಲಿ೫೦ ಜಾನುವಾರು ಮತ್ತು ೪೮ ಕುರಿ ಮೇಕೆಗಳಿಗೆ ಹಣ ಬರಬೇಕಿದೆ.
ಕುರಿ ಅಥವಾ ಮೇಕೆ ಎರಡು ವರ್ಷಕ್ಕೂ ಚಿಕ್ಕದಿದ್ದರೆ ರೂ ೨೫೦೦ ಮತ್ತು ಎರಡು ವರ್ಷಕ್ಕಿಂತ ದೊಡ್ಡದಿದ್ದರೆ ಐದು ಸಾವಿರ ಹಣ ನೀಡುವರು.ಏಪ್ರೀಲ ೨೦೨೫ ರಿಂದ ಹಸು ಎಮ್ಮೆ ಎತ್ತು ಸತ್ತರೆ ರೂ ೧೫ ಸಾವಿರ ಮತ್ತು ಕುರಿ ಮೇಕೆಗಳಿಗೆ ರೂ ೭೫೦೦ ನೀಡಲಾಗುವದು ಎಂದು ಡಾ. ಅಡಕಿ ತಿಳಿಸಿದರು.
ಆಕಸ್ಮಿಕವಾಗಿ ಮೃತಪಟ್ಟ ಜಾನುವಾರುಗಳಿಗೆ ಸರಕಾರದ ದಿಂದ ನೀಡುವ ಪರಿಹಾರ ಧನ ಕೆಲವು ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದು ಶೀಘ್ರದಲ್ಲೇ ಬಾಕಿ ಇರುವ ಹಣವೂ ಸರಕಾರದಿಂದ ಬರಲಿದೆ.