ಗ್ರಾಮ ದೇವತೆ ಜಾತ್ರಾ ಮಹೋತ್ಸವದ ದಿನದಂದು ಅನ್ನಸಂತರ್ಪಣೆಯನ್ನು ಭಕ್ತರಿಗೆ ಪ್ರಸಾದ್ ವಿತರಣೆ: ಶಾಸಕ ನಾಡಗೌಡ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ :ಪಟ್ಟಣದ ಗ್ರಾಮ ದೇವತೆ ಜಾತ್ರಾ ಮಹೋತ್ಸವದ ನಾಲ್ಕನೇ ದಿನದ ಅನ್ನಸಂತರ್ಪಣೆ ಸ್ಥಳಕ್ಕೆ ಕೆಎಸ್ಡಿ ಅಧ್ಯಕ್ಷ ಹಾಗೂ ಶಾಸಕಸಿ.ಎಸ್.ನಾಡಗೌಡ
(ಅಪ್ಪಾಜಿ) ಭೇಟಿ ನೀಡಿ ಪರಿಶೀಲನೆ ನಡೆಸಿ. ಖುದ್ದು ಅವರೇ ಸಾಂಬಾರ ತಯಾರಿಸಲು ನೆರವಾದರು. ಪಟ್ಟಣದ ಗಣ್ಯರೊಂದಿಗೆ ನಿಂತು ಭಕ್ತರಿಗೆ ಪ್ರಸಾದವನ್ನು ಶಾಸಕರು ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಮೂರು ವರ್ಷಕ್ಕೊಮ್ಮೆ ಜರುಗುವ ಈ ಜಾತ್ರೆಯನ್ನು ಪಟ್ಟಣದ ಎಲ್ಲ ಗಣ್ಯರು ಸಡಗರದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ, ಪ್ರಸ್ತುತ ಗ್ರಾಮ ದೇವತೆ ಜಾತ್ರಾ ಕಮಿಟಿಯವರು ಮೈಸೂರು ದಸರಾ ವಾತಾವರಣ ಸೃಷ್ಟಿಸಿದ್ದಾರೆ. ಎಲ್ಲೆಡೆ ವಿದ್ಯುದ್ದೀಪ ಅಲಂಕಾರ ಪಟ್ಟಣ ಕಂಗೊಳಿಸುವಂತೆ ಮಾಡಿದ್ದಾರೆ. ಭಕ್ತರಿಗೆ ದಿನವೂ ಬಗೆ ಬಗೆ ಅನ್ನಪ್ರಸಾದ, ನಾಲ್ಕನೆ ದಿನ ಹೋಳಿಗೆ, ಚಪಾತಿ, ಬೇಳೆ ಹಾಗೂ ಟೊಮೇಟೋ ಗೊಜ್ಜು ಪಲ್ಕೆ,ಅನ್ನ ಸಾಂಬಾರ ಪ್ರಸಾದ ವ್ಯವಸ್ಥೆ, ಮತ್ತು ಮನರಂಜನೆ, ಕ್ರೀಡೆಗಳನ್ನು ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಜಾತ್ರೆಯಲ್ಲಿ ಎಲ್ಲ ಧರ್ಮದವರು, ಭಾವೈಕ್ಯತೆ ಯಿಂದ ಭಾಗವಹಿಸಿ ಜಾತ್ರೆಯ ಯಶಸ್ಸಿಗೆ ಶ್ರಮಿಸುತ್ತಿರುವುದು ಒಗ್ಗಟ್ಟಿಗೆ ಸಾಕ್ಷಿಯಾಗಿದೆ. ಮುದ್ದೇಬಿಹಾಳ ಪಟ್ಟಣದ ಎಲ್ಲ ಗಣ್ಯರು, ಉದ್ಯಮಿಗಳು, ಸಂಘ ಸಂಸ್ಥೆಗಳ ಮುಖಂಡರು ಎಷ್ಟು ಹೃದಯ ಶ್ರೀಮಂತರು ಎಂಬುದಕ್ಕೆ ಜಾತ್ರೆ ತೋರಿಸಿಕೊಡುತ್ತದೆ.
ಈ ಬಾರಿ ಇತಿಹಾಸಕ್ಕೆ ಸಾಕ್ಷಿಯಾಗಿಸಿದ ಎಲ್ಲ ಜಾತ್ರಾ ಕಮಿಟಿಯ ಮುಖ್ಯಸ್ಥರಿಗೆ ಹಾಗೂ ತನುಮನದಿಂದ ಸಹಾಯ ಸಹಕಾರ ನೀಡಿದ ದಾನಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಾತ್ರಾ ಕಮಿಟಿಯ ಸದಸ್ಯರಾದ ಶರಣು ಸಜ್ಜನ, ಸುನಿಲ ಇಲ್ಲೂರ, ಸಂಗನಗೌಡ ಬಿರಾದಾರ(ಜಿಟಿಸಿ),ಪ್ರಭುರಾಜ ಕಲಬುರ್ಗಿ, ಸತೀಶ ಒಸ್ವಾಲ್,ಎಂ ಬಿ ನಾವದಗಿ,ವಿರೇಶ ಪಾಟೀಲ, ಮುತ್ತು ಕಡಿ,ಅಪ್ಪುಧನಿ ನಾಡಗೌಡ, ಚಿನ್ನು ನಾಡಗೌಡ, ರಪೀಕ ಶಿರೋಳ, ಸುರೇಶ್ ಕಲಾಲ,ಗೋಪಿ ಮಡಿವಾಳರ, ಸೇರಿದಂತೆ ಉಪಸ್ಥಿತರಿದ್ದರು.