ಇಂಡಿಯಲ್ಲಿ ನಿಧಿಗೆ ಯತ್ನ, ಒಂಬತ್ತು ಜನರ ಬಂಧನ..! ಹೇಗೆ.. ಎಲ್ಲಿ ಗೊತ್ತಾ..?
ಇಂಡಿ : ನಿಧಿ ಆಸೆಗಾಗಿ ಹಳೆಯ ಮನೆಯಲ್ಲಿ ಹಡ್ಡಿ ಹಾಳು ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾತಲಗಾಂವ ಗ್ರಾಮದಲ್ಲಿ ನಡೆದಿದೆ. ಸೊಹೇಲ್ ಕಾರಜೋಳ, ಕನ್ನಪ್ಪ ಬಮ್ಮಗೊಂಡ, ಸೈಪನಸಾಬ್ ಮಸಳಿ, ಸಲೀಮ ಮಕಾನಾದಾರ, ಶಿವಯೋಗೆಪ್ಪ ಕಣದಾಳ, ಸಲೀಮ ತಾಂಬೋಳೆ, ರಾಜಾ ಕೋತಂಬರಿ, ರಾಜಾ ಮಕಾನಾದಾರ, ಸಾಹಿಲ್ ನದಾಫ್ ಬಂಧಿತ ಆರೋಪಿಗಳು. ಇನ್ನೂ ಆರೋಪಿಗಳು ಸೊಹೇಲ್ ಕಾರಜೋಳ ಮನೆಯಲ್ಲಿ ನಿಧಿ ಇದೆ ಎಂದು ನಂಬಿ ಹಳೆಯ ಮನೆಯಲ್ಲಿ ಹಡ್ಡಿ ಹಾಳು ಮಾಡಿದ್ದು, ಆರೋಪಿಗಳ ವಿರುದ್ಧ 189(2), 324(3), 303(2), ರೆ/ವಿ 62 ಮತ್ತು 190 ಅಡಿಯಲ್ಲಿ ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.