ನಿವೃತ್ತಿ ಜೀವನದಲ್ಲಿಯೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ
ವಿಜಯಪುರ,- ತಮ್ಮ ನಿವೃತ್ತಿ ಜೀವನದಲ್ಲಿಯೂ ಉತ್ತಮ ಆರೋಗ್ಯ ಕಾಪಾಡಿಕೊಂಡು ಒಳ್ಳೆಯ ಜೀವನವನ್ನು ಸಾಗಿಸಿಕೊಂಡು ಹೋಗುವಂತೆ ಇಂದು ನಿವೃತ್ತಿ ಹೊಂದಿದ ಪೋಲೀಸ ಸಿಬ್ಬಂದಿಗಳಿಗೆ ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿಗಳಾದ ಲಕ್ಷö್ಮಣ ನಿಂಬರಗಿ ಅವರು ಸಲಹೆ ನೀಡಿದರು.
ವಿಜಯಪುರ ಜಿಲ್ಲೆಯ ಪೋಲೀಸ ಇಲಾಖೆಯ ೧೫ ಪೋಲೀಸ ಸಿಬ್ಬಂದಿ ವಯೋನಿವೃತ್ತಿಯ ಸಮಾರಂಭದಲ್ಲಿ ಮಾತನಾಡಿದ ಅವರು ತಮ್ಮ ಅಧಿಕಾರಾವಧಿಯಲ್ಲಿ ಪೋಲೀಸ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದ ತಾವು ನಿವೃತ್ತಿ ಎಂದು ತಿಳಿಯದೇ ಸಮಾಜದ ಅಭಿವೃದ್ದಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯಮಾಡಬೇಕೆಂದು ಹೇಳಿದ ಅವರು ತಮ್ಮ ಆರೋಗ್ಯ ರಕ್ಷಣೆಗೂ ಅಷ್ಟೆ ಗಮನಹರಿಸಬೇಕೆಂದರು.
ತಮ್ಮ ನಿವೃತ್ತಿ ಜೀವನದ ನಂತರವೂ ಸಹ ಏನಾದರೂ ಸಮಸ್ಯೆಗಳು ಬಂದರೆ ವಯಕ್ತಿಕವಾಗಿ ಭೇಟಿಯಾಗಿ ಸಮಸ್ಯೆ ನಿವಾರಿಸಿಕೊಳ್ಳಲು ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.
ಇಂದು ವಯೋನಿವೃತ್ತಿ ಹೊಂದಿದ ಹೋರ್ತಿ ಪೋಲೀಸ ಠಾಣೆಯ ಪಿ.ಎಸ್.ಐ ಎಸ್.ಎಸ್.ಮಾಳೆಗಾಂವ, ವಿಜಯಪೂರ ಗ್ರಾಮೀಣ ಠಾಣೆಯ ಎಸ್.ಎ.ಉಪ್ಪಾರ, ಡಿಎಸ್ಬಿ ಕಛೇರಿಯ ಆರ್.ಡಿ.ಕುಸೂರ, ಎ.ಎಸ್.ಐಗಳಾದ ಗಾಂಧಿಚೌಕ ಠಾಣೆಯ ಟಿ.ಎಂ.ಶೇಲಾರ, ಸಿ.ಕೆ.ರಾಠೋಡ, ಎಪಿಎಂಸಿ ಠಾಣೆಯ ಸಿ.ಕೆ.ದುದಗಿ, ಎಸ್.ಎಚ್.ರಾಠೋಡ, ದೇವರ ಹಿಪ್ಪರಗಿ ಠಾಣೆಯ ಡಿ.ಎಚ್.ನಧಾಫ್, ತಾಳಿಕೋಟಿ ಠಾಣೆಯ ಎನ್.ಎಂ.ಹಿರೇಮಠ, ಹೊರ್ತಿ ಠಾಣೆಯ ಎಂ.ಎಸ್.ಬಿರಾದಾರ, ತಿಕೋಟಾ ಠಾಣೆಯ ಎಸ್.ಕೆ.ಸಿಂಗೆ, ಡಿಪಿಓ ಕಚೇರಿಯ ಪ್ರಥಮ ದರ್ಜೆ ಸಹಾಯಕ ಎಂ.ಬಿ.ಪಡೇಸೂರ, ಎಪಿಎಂಸಿ ಠಾಣೆಯ ಸಿಬ್ಬಂದಿ ಎ.ಎಸ್.ಪಾಟೀಲ ಹಾಗೂ ಡಿಎಆರ್ ಘಟಕದ ಆರ್.ಎಸ್. ಪ್ರಸಾದ ಹಾಗೂ ಎಚ್.ಎಸ್.ಮುಲ್ಲಾ ಅವರುಗಳಿಗೆ ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿಗಳಾದ ಲಕ್ಷö್ಮಣ ನಿಂಬರಗಿ ಹಾಗೂ ಹೆಚ್ಚುವರಿ ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿಗಳಾದ ಎಸ್.ಕೆ. ಮಾರಿಹಾಳ ಅವರಗಳು ಶಾಲು ಹೊದಿಸಿ ಫಲಪುಷ್ಪ, ನೆನಪಿನ ಕಾಣಿಕೆ ಹಾಗೂ ಸೇವಾ ಪ್ರಮಾಣಪತ್ರ ನೀಡಿ ಗೌರವಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಿಎಸ್ಪಿ ಉಪಾಸೆ, ಸಿಪಿಐ ಪರುಶರಾಮ ಮನಗೂಳಿ, ಪಿ.ಎಸ್.ಐ ರವಿ ಯಡವನ್ನವರ, ಸಹಾಯಕ ಆಡಳಿತಾಧಿಕಾರಿ ಶಿವರಾಜ ಮಣ್ಣೂರ, ಪೋಲೀಸ್ ಇಲಾಖೆಯ ಸಿಬ್ಬಂದಿ ಮತ್ತು ನಿವೃತ್ತಿ ಹೊಂದಿದ ಸಿಬ್ಬಂದಿಯ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.