ಇಂಡಿ | ಪುರಸಭೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ
ಇಂಡಿ: ಪೌರ ಕಾರ್ಮಿಕರು ಕಾಯಂ ಮಾಡುವದು ಸರಕಾರಿ ನೌಕರರೆಂದು ಪರಿಗಣ ಸುವದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಪೌರ ನೌಕರರು ಕೆಲಸ ಕರ್ಯಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ಶಿವಶರಣ ಮಾತನಾಡಿ, ಪೌರ ನೌಕರರನ್ನು ರಾಜ್ಯ ಸರಕಾರಿ ನೌಕರರೆಂದು ಪರಿಗಣ ಸುವದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸುತ್ತಲೇ ಬಂದಿದ್ದೇವೆ, ಆದರೆ ಇದುವರೆಗೂ ಸ್ಪಂದಿಸಿಲ್ಲ. ಹೀಗಾಗಿ ಮುಷ್ಕರ ಅನಿವಾರ್ಯ ಎಂದರು.
ಆಸ್ಲಂ ಖಾದಿಮ ಮಾತನಾಡಿ, ಪೌರಾಢಳಿತ ಸಚಿವರು ಇಲಾಖೆ ಕಾರ್ಯದರ್ಶಿ ಪೌರಾಢಳಿತ ನಿರ್ದೇಶಕರು ಸೇರಿದಂತೆ ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ ಎಂದರು.
ಪ್ರವೀಣ ಸೋನಾರ ಮಾತನಾಡಿ, ಕಳೆದ ಏಪ್ರೀಲ ೬ ರಂದು ರಾಜ್ಯ ಪರಿಷತ್ತಿನ ಕರ್ಯಕಾರಣ ಸಭೆ ನಡೆಸಿ ಬೇಡಿಕೆಗಳನ್ನು ಈಡೆರಿಸಲು ೪೫ ದಿನಗಳ ಗಡುವು ನೀಡಲಾಗಿತ್ತು. ಅಲ್ಲಿಯ ವರೆಗೆ ಸಾಂಕೇತಿಕವಾಗಿ ಪ್ರತಿಭಟನೆ ಆರಂಭಿಸಿ ಗಡುವು ಮುಗಿದ ಬಳಿಕ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಲಲು ತೀರ್ಮಾನಿಸಲಾಗಿತ್ತು. ಅದರಂತೆ ನೌಕರರು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಜತೆಗೆ ಪಂಜಿನ ಮೆರವಣೆಗೆ ನಡೆಸಿ ಸರಕಾರದ ಗಮನ ಸೆಳೆಯಲಾಗಿತ್ತು ಎಂದರು.
ನಮ್ಮ ಬೇಡಿಕೆಗಳಾದ ಪೌರ ನೌಕರರನ್ನು ರಾಜ್ಯ ಸರಕಾರಿ ನೌಕರರೆಂದು ಪರಿಗಣ ಸಬೇಕು. ನಗದು ರಹಿತ ಆರೋಗ್ಯ ಚಿಕಿತ್ಸಾ ಸೌಲ ಭ್ಯ ಯೋಜನೆಗಳಾದ ಜ್ಯೋತಿ ಸಂಜಿವಿನಿಯನ್ನು ಪೌರ ನೌಕರರಿಗೂ ವಿಸ್ತರಿಸಬೇಕು ಸರಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯ ನೀಡಬೇಕು ಎಂದರು.
ಜಿಲ್ಲಾದ್ಯಕ್ಷ ಅಬ್ಬಸಲಿ ಕಾಖಂಡಕಿ, ತಾಲೂಕಾ ಅಧ್ಯಕ್ಷೆ ಲಕ್ಷಿö್ಮÃ ಕಾಲೆಭಾಗ, ಶ್ರೀಶೈಲ ಗುಡ್ಲ, ಮಲ್ಲಪ್ಪ ಕಂಠಿಕರ, ಕಲಾವತಿ ಕಾಳೆ, ಮಲ್ಲಪ್ಪ ನಡಗಡ್ಡಿ, ಲತಾ ಗುಡುಮಿ, ಮರೆಪ್ಪ ಗುಡುಮಿ, ಮಾಳು ಹೇಳವರ, ಮಲ್ಲು ಕಾಳೆ, ಶಶಿ ದೇವರ, ಬಸು ಪಾಟೀಲ, ಮಲ್ಲಿಕಾರ್ಜುನ ಶಿವಶರಣ, ದೇವೆಂದ್ರ ಕಟ್ಟಿಮನಿ, ಬಸವರಾಜ ಮುಂಜನ್ನಿ, ಚಂದು ಕಾಲೆಭಾಗ, ತಹಸಿನಬಾನು ವಾಲಿಕಾರ, ಸುಭಾನಿ ಕಸಬ, ಸದ್ದಾಂ ಶೇಖ, ಮಲ್ಲಪ್ಪ ನಡಗಡ್ಡಿ, ಮುತ್ತು ಮುರಾಳ, ದೇವೆಂದ್ರ ಕಟ್ಟಿಮನಿ ಸೇರಿದಂತೆ ಅನೇಕರು ಇದ್ದರು.
ಬೆಂಬಲ: ರಾಜ್ಯ ಸರಕಾರಿ ನೌಕರರ ಇಂಡಿ ಘಟಕದ ಅಧ್ಯಕ್ಷ ಬಸವರಾಜ ರಾಹೂರ, ತಾಲೂಕಾ ಕರವೇ ಅಧ್ಯಕ್ಷ ಬಾಳು ಮುಳಜಿ, ಪುರಸಭೆ ಸದಸ್ಯರ ಸಂಘದ ಅನೀಲಗೌಡ ಬಿರಾದಾರ, ಭೀಮಾಶಂಕರ ಮೂರಮನ, ಉಮೇಶ ದೇಗಿನಾಳ, ಬಿಜೆಪಿಯ ಶೀಲವಂತ ಉಮರಾಣ , ಮಲ್ಲಿಕಾರ್ಜುನ ಕಿವಡೆ ಮತ್ತಿತರರು ಬೆಂಬಲ ವ್ಯಕ್ತ ಪಡಿಸಿದರು.
ಇಂಡಿ: ಪುರಸಭೆ ನೌಕರರು ತಮ್ಮ ಬೇಡಿಕೆ ಆಗ್ರಹಿಸಿ ಪುರಸಭೆ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.